ಹಿಂದಿನ ಕಾಲದಲ್ಲಿ ಮಕ್ಕಳು ಜನಿಸಿದ ಮೂರು ದಿನಗಳ ನಂತರ ಸೊಂಟಕ್ಕೆ, ಕೈಗೆ, ಕಾಲಿಗೆ ಕಪ್ಪು ದಾರ ಕಟ್ಟುತ್ತಿದ್ದರು.
ಹೆಣ್ಣು ಮಗುವಾಗಲೀ, ಗಂಡು ಮಗುವಾಗಲಿ ಮಕ್ಕಳು ಬೆಳೆದಂತೆಲ್ಲಾ ಕೈಗೆ ಬೆಳ್ಳಿ ಕಪ್ಪ, ಕಾಲಿಗೆ ಬೆಳ್ಳಿ ಚೈನು, ಸೊಂಟಕ್ಕೆ ಉಡುದಾರ ಕಟ್ಟುತ್ತಿದ್ದರು.
ದೊಡ್ಡವರಾದ ಮೇಲೆ ಗಂಡು ಮಕ್ಕಳಿಗೆ ಎಡಗೈಗೆ ಗಡಿಯಾರ ಮತ್ತು ಬಲಗೈಗೆ ಬೆಳ್ಳಿ ಕಪ್ಪ ಮತ್ತು ಸೊಂಟಕ್ಕೆ ಕರಿದಾರ ಬಂತು.
ಹೆಣ್ಣು ಮಕ್ಕಳಿಗೆ ಕೈಗೆ ಗಾಜಿನ ಬಳೆ, ಕಾಲಿಗೆ ಬೆಳ್ಳಿ ಚೈನು ಮತ್ತು ಸೊಂಟಕ್ಕೆ ಬೆಳ್ಳಿ ಗೆಜ್ಜೆ ಡಾಬು ಬಂತು. ಡಾಬು ಹೆಂಗಸರ ಸೊಂಟಕ್ಕೆ ಆಧಾರ ಒದಗಿಸುತ್ತದೆ ಮತ್ತು ರಕ್ತ ಸಂಚಾರವನ್ನು ನಿಯಂತ್ರಣಕ್ಕೆ ತರುತ್ತದೆ. ಸೊಂಟಕ್ಕೆ ಡಾಬು ಹಾಕಿರುವ ಹೆಂಗಸರಿಗೆ ಯಾವುದೇ ಕಾರಣಕ್ಕೂ ಸೊಂಟ ನೋವು ಬರುವುದಿಲ್ಲ.
ಹಿಂದಿನವರು ಏನೇ ಸಂಪ್ರದಾಯ ಅನುಕರಣೆ ಮಾಡಿದರೂ ಅದು ವೈಜ್ಞಾನಿಕವಾಗಿ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿರುತ್ತಿತ್ತು.
ಗಂಡು ಮಕ್ಕಳಿಗೆ ದೊಡ್ಡವರಾದ ಮೇಲೂ ಉಡುದಾರ ಕಟ್ಟುಲು ಕಾರಣವೇನು ?
ಹೆಣ್ಣಾಗಲಿ, ಗಂಡಾಗಲಿ ಕುಳಿತುಕೊಳ್ಳಲು, ನಿಂತುಕೊಳ್ಳಲು , ನಡೆದಾಡಲು, ಕಷ್ಟಕರವಾದ ಕೆಲಸ ಮಾಡಲು, ಭಾರವಾದ ವಸ್ತುಗಳನ್ನು ಎತ್ತಲು, ಅದರಲ್ಲೂ
ಮುಖ್ಯವಾಗಿ ವಂಶಾಭಿವೃದ್ಧಿ ಮಾಡಲು ಸೊಂಟವೇ ಪ್ರಮುಖವಾದ ಅಂಗ. ಒಂದು ವೇಳೆ ಸೊಂಟ ಬಿದ್ದು ಹೋದರೆ ಈ ಮೇಲಿನ ಯಾವುದೇ ಕಾರ್ಯವನ್ನು ನಿರ್ವಹಿಸಲು ಸಾಧ್ಯವೇ ಇಲ್ಲ.
ಒಂದು ಗಿಡ ನೇರವಾಗಿ ಬೆಳೆಯಲು ಒಂದು ದಾರವನ್ನೋ ಅಥವಾ ಹಗ್ಗವನ್ನೋ ಕಟ್ಟಿ ಬೆಳೆಸುತ್ತಾರೆ.
ಅದೇ ರೀತಿ ಮನುಷ್ಯನೂ ಕೂಡ ಗಟ್ಟಿಯಾಗಿ ದಷ್ಟ ಪುಷ್ಟವಾಗಿ ಬೆಳೆಯಲು ಉಡುದಾರ ಸಹಕಾರಿಯಾಗುತ್ತದೆ.
ಮನುಷ್ಯನ ದೇಹದ ರಕ್ತ ಚಲನೆಯನ್ನು ನಿಯಂತ್ರಿಸುತ್ತದೆ.
ಇದೇ ರೀತಿ ಮಹಿಳೆಯರಿಗೂ ಕೂಡ ಬೆಳ್ಳಿಯ ಗೆಜ್ಜೆ ಡಾಬು ಅವರ ಸೊಂಟಕ್ಕೆ ಗಟ್ಟಿತನವನ್ನು ನೀಡುತ್ತದೆ.
ಉಡುದಾರವನ್ನು ವರ್ಷಕೊಮ್ಮೆ ಬದಲಾಯಿಸಬೇಕು ಒಮ್ಮೆ ಉಡುದಾರವನ್ನು ಕಟ್ಟಿಕೊಂಡರೆ ಅದಾಗಿ ಅದು ಕಿತ್ತು ಹೋಗುವವರೆಗೂ ನಾವು ಅದನ್ನು ಬದಲಾಯಿಸುವುದಿಲ್ಲ.
ಆದರೆ ಅದನ್ನು ವರ್ಷಕೊಮ್ಮೆ ಬದಲಾಯಿಸಬೇಕು ಎಂದು ತಿಳಿದವರು ಹೇಳುತ್ತಾರೆ.
ಯಾವಾಗ ಬದಲಿಸಬೇಕು ?
ಉಡುದಾರವನ್ನು ಪ್ರತಿ ವರ್ಷ ಜನವರಿ ತಿಂಗಳ 14 ನೇ ತಾರೀಕಿನಂದು ಉತ್ತರಾಯಣದಲ್ಲಿ ಅಥವಾ ಜುಲೈ ತಿಂಗಳ 16 ನೇ ತಾರೀಕಿನಂದು ದಕ್ಷಿಣಾಯನದಲ್ಲಿ ಬದಲಾಯಿಸಬೇಕೆಂದು ಹೇಳಲಾಗಿದೆ.
ಬದಲಿಸಿದ ಹಳೆಯ ಉಡುದಾರವನ್ನು ಏನು ಮಾಡಬೇಕು ?
ಹಳೆಯ ಉಡುದಾರವನ್ನು ಹಾಗೇ ಸುಮ್ಮನೆ ಬಿಸಾಕಬಾರದು.
ಅದನ್ನು ತೆಗೆದುಕೊಂಡು ಒಮ್ಮೆ ಮೂಸಿ ನೋಡಿ, ಎರಡೂ ಕೈಗಳಿಂದ ನಮ್ಮ ಕಣ್ಣುಗಳಿಗೆ ಒತ್ತಿಕೊಂಡು ನಮಸ್ಕಾರ ಮಾಡಿ, ಇಷ್ಟು ದಿನ ನನ್ನ ಸೊಂಟಕ್ಕೆ ಚೈತನ್ಯ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ಅದನ್ನು ಒಂದು ಹಸಿರು ಗಿಡಕ್ಕೆ ಕಟ್ಟಬೇಕು.
ಕಪ್ಪು ಉಡುದಾರವನ್ನೇ ಏಕೆ ಕಟ್ಟಬೇಕು ?
ನವ ಜಾತ ಶಿಶುಗಳಿಗೆ ಕೈಗೆ, ಕಾಲಿಗೆ ಮತ್ತು ಸೊಂಟಕ್ಕೆ ಕಪ್ಪು ದಾರ ಕಟ್ಟುತ್ತಾರೆ, ಮತ್ತು ಹಣೆಗೆ ಕಪ್ಪು ಮಸಿ ಬಳಿಯುತ್ತಾರೆ.
ಏಕೆಂದರೆ ಕಪ್ಪು ಬಣ್ಣವು ಮನುಷ್ಯನ ಕಾಕ ದೃಷ್ಟಿಯನ್ನು ಅಂದರೆ ಕೆಟ್ಟ ದೃಷ್ಟಿಯನ್ನು
ಹೋಗಲಾಡಿಸುತ್ತದೆ. ಅಂದರೆ ದೃಷ್ಟಿ ತಾಕುವುದನ್ನು ತಡೆಗಟ್ಟುತ್ತದೆ. ಈ ಕಾರಣಕ್ಕೆ ಕಪ್ಪು ದಾರವನ್ನು ಕಟ್ಟುತ್ತಾರೆ.
ಇದು ಸಂಗ್ರಹಿಸಿದ ಮಾಹಿತಿ.

