*ಸುನಾಮಿನ್ಯೂಸ್, ಜೂನ್,10
ನೈಸರ್ಗಿಕ ವಿಕೋಪಗಳು ಹೇಳಿ,ಕೇಳಿ ಘಟಿಸುವುದಿಲ್ಲ, ಇಂತಹ ವಿಕೋಪಗಳಿಗೆ ತುತ್ತಾಗಿ ಪ್ರಾಣಕಳೆದುಕೊಳ್ಳುವರ ಮತ್ತು ಗಾಯಗೊಳ್ಳುವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಲಭ್ಯ ಇರುವಂತಹ ಎಲ್ಲಾ ಸೌಲಭ್ಯಗಳನ್ನು ಅವರ ಮನೆಬಾಗಿಲಿಗೆ ಪ್ರಮಾಣಿಕವಾಗಿ ತಲುಪಿಸಿ, ನೊಂದವರ ಕುಟುಂಬದ ಕಣ್ಣಿರಿಗೆ ಸರ್ಕಾರದ ಮಟ್ಟದಲ್ಲಿ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್ ಹೇಳಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಇತ್ತಿಚಿಗೆ ಸಿಡಿಲು ಬಡಿದು ಪ್ರಾಣ ಕಳೆದುಕೊಂಡ ಚಂದ್ರಶೇಖರ ಅವರ ಮನೆಗೆ ಮಂಗಳವಾರ ಭೇಟಿ ನೀಡಿ ಐದು ಲಕ್ಷರೂಪಾಯಿಗಳ ಚೆಕ್ ನ್ನು ಮೃತರ ಕುಟುಂಬವರ್ಗಕ್ಕೆ ಹಸ್ತಾಂತರ ಮಾಡಿ, ಪ್ರಾಣ ತಂದು ಕೊಡಲಾಗದು, ಆದರೇ ನಿಮ್ಮ ಜೊತೆಗೆ ಸದಾ ನಾವೀರುತ್ತೇವೆ ಎಂದು ಮೃತರ ಕುಟುಂಬಕ್ಕೆ ಶಾಸಕರು ಧೈರ್ಯ ತುಂಬಿದರು.
ಇತ್ತಿಚಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ತುಂಬನೂ ಪೂರ್ವ ಮುಂಗಾರು, ವರ್ಷದ ಮುಂಗಾರು ಮಳೆ ಸಮೃದ್ಧವಾಗಿ ಸುರಿದು ಅನ್ನದಾತರ ಮುಖದಲ್ಲಿ ಸಂತಸ ಮೂಡಿಸಿದೆ. ಇದೇ ಹೊತ್ತಿನಲ್ಲಿ ಗುಡುಗು, ಸಿಡಿಲಿನ ಆರ್ಭಟಕ್ಕೆ ಸಿಲುಕಿ ಅಮಾಯಕ ಅನ್ನದಾತರು ಪ್ರಾಣ ಸಹ ಕಳೆದುಕೊಂಡು, ಅವರ ಕುಟುಂಬಗಳ ಬದುಕು ಬೀದಿಗೆ ಬಂದು ನಿಂತಿರುವುದು ಶೋಚನಿಯ ಎಂದು ಮೃತಕುಟುಂಬದ ಭವಿಷ್ಯದ ಬಗ್ಗೆ ಶಾಸಕರು ಮರುಕ ವ್ಯಕ್ತಪಡಿಸಿದರು.
ತಂತ್ರಜ್ಞಾನ ಸಾಕಷ್ಟು ವಿಸ್ತಾರವಾಗಿದ್ರೂ ಇನ್ನೂ ಕೂಡ ಗ್ರಾಮೀಣಾ ಪ್ರದೇಶದಲ್ಲಿ ನೈಸರ್ಗಿಕ ವಿಕೋಪಗಳ ಬಗ್ಗೆ ಜಾಗೃತಿ ಮೂಡಿಲ್ಲ. ಹೀಗಾಗಿ ಪ್ರತಿ ಮಳೆಗಾಲದಲ್ಲೂ ಸಿಡಿಲು ಬಡಿದು ಪ್ರಾಣಕಳೆದುಕೊಳ್ಳುವರ ಸಂಖ್ಯೆ ಹೆಚ್ಚುತ್ತಲೆ ಇದೆ. ಮಳೆ,ಸಿಡಿಲುನಂತಹ ವಿಕೋಪಕ್ಕೆ ತುತ್ತಾಗಿ ಹಲವು ಕುಟುಂಬಗಳ ಬದುಕು ಬೀದಿ ಬಂದಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ್ ವಿಷಾದಿಸಿದರು.
ಜೆಡಿಎಸ್ ಪಕ್ಷದ ಕ್ಷೇತ್ರದ ಅಧ್ಯಕ್ಷರಾದ ವೈ.ಮಲ್ಲಿಕಾರ್ಜುನ, ಹಿರಿಯ ಮುಖಂಡ ಕನ್ನಿಹಳ್ಳಿ ಚಂದ್ರಶೇಖರ, ದಶಮಾಪುರ ಗ್ರಾಮದ ನಾಯಕರಾದ ಮಾಳಗಿ ಗಿರೀಶ್, ಚಂದ್ರಪ್ಪ, ಸಿದ್ದಬಸಪ್ಪ, ಜಗದೀಶ್, ನಾಗರಾಜ, ದಯಾನಂದ, ಉಪ ತಹಸಿಲ್ದಾರಾದ ಶಿವಕುಮಾರ್ ಗೌಡ ಸೇರಿದಂತೆ ಹಲವರು ಶಾಸಕರ ಜೊತೆಯಲ್ಲಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.