Welcome to sunamipatrike   Click to listen highlighted text! Welcome to sunamipatrike
Thursday, May 22, 2025
HomeUncategorizedಮಾ, 4 ಕ್ಕೆ ಶ್ರೀ ನೆರಗಲ್ಲು ದುರುಗಮ್ಮದೇವಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ.

ಮಾ, 4 ಕ್ಕೆ ಶ್ರೀ ನೆರಗಲ್ಲು ದುರುಗಮ್ಮದೇವಿ ನೂತನ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ.

ಮಾರ್ಚ್ ನಾಲ್ಕಕ್ಕೆ ಗ್ರಾಮದೇವತೆ ಶ್ರೀ ನೆರೆಗಲ್ಲು ದುರುಗಮ್ಮದೇವಿಯ ನೂತನ ಶಿಲಾ ಮೂರ್ತಿಯ ಅದ್ದೂರಿ ಪ್ರತಿಷ್ಠಾಪನಾ ಕಾರ್ಯಕ್ರಮ.

ಸುನಾಮಿನ್ಯೂಸ್,
ಹಗರಿಬೊಮ್ಮನಹಳ್ಳಿ,ಜ,8
ಪಟ್ಟಣದ ಗ್ರಾಮದೇವತೆ ಹಾಗು ಆರಾಧ್ಯ ದೇವತೆಯು ಆಗಿರುವ ಶ್ರೀ ನೆರೆಗಲ್ಲು ದುರುಗಮ್ಮದೇವಿಯ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವವನ್ನು ಮಾರ್ಚ್, ಎರಡ ರಿಂದ ನಾಲ್ಕರ ವರೆಗೆ ಪಟ್ಟಣದ ರಾಮನಗರದಲ್ಲಿ ನಾಣಿಕೇರಿ ದೈವಸ್ಥರು ಹಮ್ಮಿಕೊಂಡಿದ್ದಾರೆ.

ಪಟ್ಟಣದ ರಾಮನಗರದ ಶ್ರೀ ನೆರೆಗಲ್ಲು ದುರುಗಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಬೆಳಿಗ್ಗೆ ನೂತನ ಶಿಲಾ ಮೂರ್ತಿ ಪ್ರತಿಷ್ಠಾನೆಯ ನಿಮಿತ್ತ ನಾಣಿಕೇರಿ ದೈವಸ್ಥರು ಪೂರ್ವಭಾವಿ ಸಭೆ ನಡೆಸಿ, ಪ್ರತಿಷ್ಠಾಪನಾ ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿದಂತೆ ಸೂಕ್ತವಾದ, ಉಪಯುಕ್ತವಾದ ಸಲಹೆಗಳನ್ನು ಕೊಟ್ಟು, ವ್ಯಾಪಕವಾಗಿ ಚರ್ಚಿಸಿದರು.

ಅನಿರೀಕ್ಷಿತ ಘಟನೆಯಿಂದಾಗಿ ಈಗೀರುವ ಶ್ರೀ ದುರುಗಮ್ಮದೇವಿ ಮೂರ್ತಿ ಭಿನ್ನವಾಗಿದ್ದು, ಭಿನ್ನವಾದ ಮೂರ್ತಿಯನ್ನು ಬದಲಿಸಿ, ನೂತನ ಶಿಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ವರ್ಷದ ಹಿಂದೆಯೇ ನಿರ್ಧರಿಸಲಾಗಿದ್ದು. ಈಗಾಗಲೇ ನೂತನ ಮೂರ್ತಿ ಸಿದ್ದವಾಗಿದೆ ಅದರ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಯೂ, ಅತ್ಯಂತ ವಿಜೃಂಭಣೆಯಿಂದಲೂ ಆಚರಿಸಲು ಸಭೆಯಲ್ಲಿ ತಿರ್ಮಾನಿಸಲಾಯ್ತು.

ಪಟ್ಟಣ ಸೇರಿದಂತೆ ಅಕ್ಕ,ಪಕ್ಕದ ಗ್ರಾಮಗಳಲ್ಲಿನ
ಸರ್ವ ಸದ್ಭಕ್ತರು ಈ ಪ್ರತಿಷ್ಠಾಪನಾ ಕಾರ್ಯಕ್ರಮಗಳಲ್ಲಿ ಸಕುಟುಂಬ ಪರಿವಾರ ಸಮೇತರಾಗಿ ಭಾಗವಹಿಸುವುದರ ಜೊತೆಗೆ ತನು, ಮನ,ಧನ ನೀಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆಯೂ ಸಭೆಯ ಮೂಲಕ ನಾಣಿಕೇರಿ ದೈವಸ್ಥರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಭೆಯಲ್ಲಿ ದೈವಸ್ಥರ ಪ್ರಮುಖರಾದ ಬಾರಿಕರ ಬಾಪೂಜಿ, ಅರಸಿಕೆರಿ ಹನುಮಂತಪ್ಪ, ಕುರುಬರ ನಾಗಪ್ಪ, ಹಿರಿಯ ಪತ್ರಕರ್ತಹುಳ್ಳಿಪ್ರಕಾಶ,
ಜೋಗಿ ಹನುಮಂತಪ್ಪ, ಬಡಲಡಿಕಿ ಕೃಷ್ಣಪ್ಪ, ದಾದಮ್ಮನವರ ರಾಜಪ್ಪ, ಸೆರೆಗಾರ ಹುಚ್ಚಪ್ಪ, ಶ್ರೀ ನೆರೆಗಲ್ಲು ದುರುಗಮ್ಮದೇವಿ ಸೇವಾ ಸಮಿತಿಯ ಚಿಗರಿ ಮಾರುತಿ, ಗರಗದ ಪ್ರಕಾಶ, ಪ್ಲಂಬರ್ ಮಾರುತಿ, ಡ್ರೈವರ್ ಚಂದ್ರು, ರಾಚ್ಚಣ್ಣರ ರಾಘವೇಂದ್ರ, ವಿ.ಹುಲುಗಪ್ಪ, ಹನುಮೇಶ, ಹುಗ್ಗಿ ಹುಲುಗಪ್ಪ, ನಾಗರಾಜ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ವಿಗೆ ಸೂಕ್ತ ಸಲಹೆ, ಸೂಚನೆಗಳನ್ನು ಕೊಟ್ಟರು.

ಕಾರ್ಯಕ್ರಮಗಳು:

ಮಾರ್ಚ್, 2,2025, ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ನೆರೆಗಲ್ಲು ದುರುಗಮ್ಮದೇವಿಯ ನೂತನ ನೆರೆಗಲ್ಲು ದುರುಗಮ್ಮದೇವಿಯ ಶಿಲಾ ಮೂರ್ತಿಯ ಪುರ ಪ್ರವೇಶ. ಪ್ರಮುಖ ಬೀದಿಗಳಲ್ಲಿ ಸಕಲ ಕಲಾ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ. ನಂತರ ಪ್ರಸಾದ ವಿತರಣೆ ಜರುಗಲಿದೆ.

ಮಾರ್ಚ್, 3, ಸೋಮವಾರ, ಫಾಲ್ಗುಣ ಶುದ್ಧ ಚತುರ್ಥಿಯಂದು ಬೆಳಿಗ್ಗೆ 7-30ಕ್ಕೆ ಗಂಗಾ ಪೂಜೆ, ಗೋಪೂಜೆ, ಸ್ವಸ್ತಿಪುಣ್ಯಾವಲೋಚನಾ, ಋದ್ವೀಗ್ ಮಾರ್ಗ್ ಕಳಸ ಸ್ಥಾಪನೆ, ಆಹ್ವೀಕಾ ದೇವತಾ ಪೂಜೆ, ಪ್ರಾಯಶ್ಚಿತ್ತ ಹೋಮ, ಜಲಾಧೀವಾಸ, ಧಾನ್ಯಾಧೀವಾಸ, ವಸ್ತ್ರಾಧೀವಾಸ. ನಂತರ ಪ್ರಸಾದ ವಿತರಣೆ.

ಮಾರ್ಚ್, 4, ಮಂಗಳವಾರ. ಫಾಲ್ಗುಣ ಶುದ್ಧ ಪಂಚಮಿ ದಿನದಂದು ಪಂಚಗವ್ಯದಿಂದ ಪ್ರತಿಮಾ ಶುದ್ಧೀಕರಣ. ವಾಸ್ತು ನವಗ್ರಹ ಪ್ರಭಾವ ದೇವತೆ ಹೋಮ, ಪೂರ್ಣಾಹುತಿ, ಪೀಠಪೂಜೆ.
ಬೆಳಿಗ್ಗೆ 5-30 ರಿಂದ ಬೆಳಿಗ್ಗೆ 7-15ರ ವರೆಗೆ ಕುಂಭಲಗ್ನದಲ್ಲಿ ಶ್ರೀ ನೆರೆಗಲ್ಲು ದುರುಗಮ್ಮದೇವತಾ ಪ್ರತಿಷ್ಠಾಪನೆ ಕಾರ್ಯ. ನಂತರ ನೇತ್ರಾವಲೋಚನಾ, ಅಭಿಷೇಕ, ಫಲಾ ಸರ್ಮಪಣೆ ಹಾಗು ಮಹಾಮಂಗಳಾರಾತಿ ಜರುಗಲಿದೆ.

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್. .
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!