- ಹುಳ್ಳಿಪ್ರಕಾಶ, ಸಂಪಾದಕರು
- ಸುನಾಮಿನ್ಯೂಸ್,
- ಹಗರಿಬೊಮ್ಮನಹಳ್ಳಿ,ಮಾರ್ಚ್, 21
ರಾಜ್ಯದಲ್ಲಿ ಬಿಸಿಲ ಬೇಗೆಯ ನಡುವೆ ಸೋಮವಾರ ದಿಂದ ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ವಿಜಯನಗರ, ಬಾಗಲಕೋಟೆ, ಬಳ್ಳಾರಿ, ಕಲಬುರ್ಗಿ, ರಾಯಚೂರು ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬಿಸಿಲಿಂದ ಬೆಂದ ಜನತೆಗೆ ಪೂರ್ವ ಮುಂಗಾರು ತಂಪೆರೆದಿದೆ. ಬಿಸಿಲ ಝಳ ತಪ್ಪಿಸಿದ ಮಳೆರಾಯನಿಗೆ ಜನತೆ ಮನದಲ್ಲಿಯೇ ಧನ್ಯತೆ ಮೆರೆದಿದ್ದಾರೆ
ಇತ್ತ ಒಂದು ಮಳೆ ಬಿತ್ತು ಎಂದರೆ ಜನರು ಮಳೆ ನಕ್ಷತ್ರದತ್ತ ಮುಖ ಮಾಡುವುದು ಸಹಜ. ಬಹು ಮುಖ್ಯವಾಗಿ ಅನ್ನದಾತರು ಈ ಬಾರಿ ಯಾವ ತಿಂಗಳಲ್ಲಿ ಯಾವ ಮಳೆ ಬರುತ್ತೆ ಎಂಬುದರ ಬಗ್ಗೆ ಚರ್ಚೆ ಮಾಡುತ್ತಾರೆ. ಆ ಕುರಿತಂತೆ ಈ ವರ್ಷ ಪೂರ್ತಿ ಸುರಿಯುವ ಮಳೆಗಳ ಕುರಿತಂತೆ ಸುನಾಮಿ ಓದುಗರರಿಗೆ ವಿವರಗಳನ್ನು ನೀಡಲಾಗಿದೆ.
ಮಳೆ ನಕ್ಷತ್ರಗಳು:
- ಅಶ್ವಿನಿ ಏಪ್ರಿಲ್ 13 ರಿಂದ 26 ರವರಗೆ
- ಭರಣಿ – ಏಪ್ರಿಲ್ 27 ರಿಂದ ಮೇ 10 ರವರಗೆ
- ಕೃತಿಕಾ – ಮೇ 11 ರಿಂದ 23 ರವರಗೆ
- ರೋಹಿಣಿ – ಮೇ 24 ರಿಂದ ಜೂನ್ 6 ರವರಗೆ
- ಮೃಗಶಿರ – ಜೂನ್ 7 ರಿಂದ 20.
- ಆದ್ರ್ರ/ಆರಿದ್ರ- ಜೂನ್ 21 ರಿಂದ ಜುಲೈ 4
- ಪುನರ್ವಸು – ಜುಲೈ 5 ರಿಂದ 19
- ಪುಷ್ಯ – ಜುಲೈ 20 ರಿಂದ ಆಗಸ್ಟ್ 2.
- ಆಶ್ಲೇಷಾ – ಆಗಸ್ಟ್ 3 ರಿಂದ 16.
- ಮಖ/ಮಾಘ/ಮಾಫ್ – ಆಗಸ್ಟ್ 17 ರಿಂದ 29.
- ಪುಬ್ಬಾ – ಆಗಸ್ಟ್ 30 ರಿಂದ ಸೆಪ್ಟೆಂಬರ್ 12.
- ಉತ್ತರಿ – ಸೆಪ್ಟೆಂಬರ್ 13 ರಿಂದ 26.
- ಹಸ್ತ – ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 9.
- ಚಿತ್ತಾ – ಅಕ್ಟೋಬರ್ 10 ರಿಂದ 24.
- ಸ್ವಾತಿ – ಅಕ್ಟೋಬರ್ 25 ರಿಂದ ನವೆಂಬರ್ 6.
- ವಿಶಾಖ – ನವೆಂಬರ್ 7 ರಿಂದ 18.
- ಅನುರಾಧಾ – ನವೆಂಬರ್ 19 ರಿಂದ ಡಿಸೆಂಬರ್ 1
- ಹುಳ್ಳಿಪ್ರಕಾಶ, ಸಂಪಾದಕರು.