Welcome to sunamipatrike   Click to listen highlighted text! Welcome to sunamipatrike
Thursday, May 22, 2025
HomeUncategorizedಸಹಸ್ರಾರು ಭಕ್ತರ ಮಂಡಲ ಪೂಜೆಯೊಂದಿಗೆ ನಾಣಿಕೆರಿ ಶ್ರೀ ನರೆಗಲ್ಲ್ ದುರುಗಮ್ಮದೇವಿ ಪುನಃ ಪ್ರತಿಷ್ಠಾಪನಾ ಮಹೋತ್ಸವ ಸಂಪನ್ನ....

ಸಹಸ್ರಾರು ಭಕ್ತರ ಮಂಡಲ ಪೂಜೆಯೊಂದಿಗೆ ನಾಣಿಕೆರಿ ಶ್ರೀ ನರೆಗಲ್ಲ್ ದುರುಗಮ್ಮದೇವಿ ಪುನಃ ಪ್ರತಿಷ್ಠಾಪನಾ ಮಹೋತ್ಸವ ಸಂಪನ್ನ. ರುಚಿಕರವಾದ ಹೊಳಿಗೆ ಊಟವನ್ನು ಸವಿದ ಹತ್ತು ಸಾವಿರಕ್ಕೂ ಅಧಿಕ ಭಕ್ತರು!

* ಸುನಾಮಿ ನ್ಯೂಸ್, ಏ,24

* ಹುಳ್ಳಿಪ್ರಕಾಶ, ಸಂಪಾದಕರು

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಗ್ರಾಮ ದೇವತೆ ನಾಣಿಕೇರಿ ನರೆಗಲ್ ದುರುಗಮ್ಮದೇವಿಯ ಪುನ: ಪ್ರತಿಷ್ಠಾಪಾನ ಮಹೋತ್ಸವದ ನಿಮಿತ್ತವಾಗಿ 47 ದಿನಗಳಿಂದ ಜರುಗುತ್ತ ಬಂದಿದ್ದ ಪೂಜಾ ಕಾರ್ಯಕ್ರಮವು 48ನೇ ದಿನವಾದ ಭಾನುವಾರ “ಮಹಾಮಂಡಲ ಪೂಜೆ”ಯೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮಾರ್ಚ್ ನಾಲ್ಕು, ಮಂಗಳವಾರ ಬೆಳಗಿನ ಜಾವದಲ್ಲಿ ದೇವಿಯ ನೂತನ ಶಿಲಾಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ಜರುಗಿತ್ತು. ಮಾರ್ಚ್ ಐದರಿಂದ ಸತತ 47 ದಿನಗಳ ಕಾಲ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಗಿನ ಜಾವದಲ್ಲಿ ದೇವಿಗೆ ಅಭಿಷೇಕ, ವಿವಿಧ ಅಲಂಕಾರ ಸಹಿತ ವಿಶೇಷ ಪೂಜೆಗಳು ಜರುಗುತ್ತಲೆ ಬಂದಿದ್ದವು.

48ನೇ ದಿನವಾದ ಏ,20, ಭಾನುವಾರ ಸಕಲ ಧಾರ್ಮಿಕ ವಿಧಿ,ವಿಧಾನಗಳ ಆಚರಣೆ, ಹೋಮ,ಹವನದಿಗಳೊಂದಿಗೆ, ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ” ಮಹಾ ಮಂಡಲಪೂಜೆ” ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.

ಪಟ್ಟಣದ ರಾಮನಗರದ ರೈತರ ಓಣಿಯ ಶ್ರೀಮಾರುತಿ ಗರಡಿ ಮನೆ ಹತ್ತೀರ ನರೆಗಲ್ಲ್ ದುರುಗಮ್ಮ ದೇವಿ ದೇವಸ್ಥಾನ ಇದೆ.
ಐತಿಹಾಸಿಕ ನಾಣಿಕೇರಿಗೆ ಸೇರಿದ ಮೂಲಿಮನಿ ಪುರೋಹಿತರ ಮನೆತನದ ಮೂಲಿಮನಿ ಬದರಿನಾರಾಯಣ ಭಟ್ಟರ ಸಾರಥ್ಯದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮಂಡಲಪೂಜೆ, ಬೆಳಿಗ್ಗೆ 10-30 ಗಂಟೆಗೆ ಮಹಾಮಂಗಳಾರಾತಿಯೊಂದಿಗೆ ಸಂಪನ್ನಗೊಂಡಿತು.

*ಭಕ್ತರ ದಂಡು:

ಪಟ್ಟಣದ ರಾಮನಗರದ ರೈತರ ಓಣಿ, ಅರಳಿಹಳ್ಳಿ, ಕುರದಗಡ್ಡಿ, ಚಿಂತ್ರಪಳ್ಳಿ, ಸೋನಿಯಾನಗರ, ರಾಂರಹೀಂ ನಗರ, ಬಸವೇಶ್ವರ ಬಜಾರ, ಮಿಲ್ಟ್ರಿ ಬಯಲು, ಕೆವಿಓಆರ್ ಕಾಲೋನಿ, ಬಸವೇಶ್ವರ ಬಜಾರ, ಭೋವಿ ಕಾಲೋನಿ, ಹಳೇಊರಿನ ಗೊಲ್ಲರ ಓಣಿ, ಜಗಜ್ಯೋತಿನಗರ, ನೆಹರೂನಗರ ಸಹಿತ ಪಟ್ಟಣದ 23 ವಾರ್ಡ್ ಗಳ ಸಾವಿರಾರು ಭಕ್ತರು ಮಂಡಲಪೂಜೆಯಲ್ಲಿ ಭಾಗವಹಿಸಿ ದೇವಿಯ ಆರ್ಶೀವಾದ ಪಡೆದುಕೊಂಡರು. ದೇವಿದರ್ಶನಕ್ಕೆ ಬಂದಿದ್ದ ಭಕ್ತರಲ್ಲಿ ಸಕುಟುಂಬ ಸಮೇತರಾಗಿ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದಿದ್ದು ಒಂದು ವಿಶೇಷ.

ಪಟ್ಟಣದ ಜೊತೆಗೆ ಅಕ್ಕ,ಪಕ್ಕದ ಬ್ಯಾಲಾಳು, ಕೆಚ್ಚಿನ ಬಂಡಿ, ಬಲ್ಲಾಹುಣ್ಸಿ, ವಲ್ಲಭಾಪುರ, ಕಡ್ಲಬಾಳು, ಆನೆಕಲ್ಲು, ವರಲಹಳ್ಳಿ, ಮರಬ್ಬಿಹಾಳು, ಪಿಂಜಾರಹೆಗ್ಡಾಳ, ಉಲವತ್ತಿ, ಆನಂದದೇವನಹಳ್ಳಿ ಸಹಿತ ಮುವತ್ತಾರು ಗ್ರಾಮಗಳಿಂದಲೂ ಭಕ್ತರು ಬೈಕೂ, ಕಾರು ಹೇರಿ ಬಂದು ದೇವಿಯ ದರ್ಶನ ಪಡೆದುಕೊಂಡರು.

* ಗಣ್ಯರು ಭಾಗಿ:

ಕ್ಷೇತ್ರದ ಶಾಸಕರಾದ ಕೆ.ನೇಮಿರಾಜನಾಯ್ಕ್, ಪುರಸಭೆ ಅಧ್ಯಕ್ಷ ಮರಿರಾಮಪ್ಪ, ಸರ್ಕಲ್ ಇನ್ಸ್ ಪೇಕ್ಟರ್ ವಿಕಾಸ್ ಲಮಾಣಿ,ನಾಣಿಕೆರಿ ದೈವಸ್ಥರ ಪ್ರಮುಖರಾದ ಬಾರಿಕರ ಬಾಪೂಜಿ, ಗಣ್ಯವರ್ತಕರಾದ ಗಂಗಾವತಿ ಸುದರ್ಶನ,
ರೈತಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ದಾದಮ್ಮನವರ ಬಸವರಾಜ, ನಾಣಿಕೇರಿ ದೈವಸ್ಥರಾದ ಮುಗುಲಿ ಕನಕಪ್ಪ, ಕುದುರಿ ಬಸವರಾಜ, ದಾದಮ್ಮನವರ ಮರಿಹುಲುಗಪ್ಪ, ವಿ.ಸೋಮಣ್ಣ, ಅಗಸರ ಕೊಟ್ರಪ್ಪ, ಮಡಿವಾಳರ ತಿಮ್ಮಪ್ಪ, ಅಗಸರ ಪ್ರಕಾಶ, ಗ್ರಾಪಂ ಮಾಜಿ ಸದಸ್ಯರಾದ ಎಂಪಿ ರುದ್ರಮ್ಮ ಬಾಪೂಜಿ, ಹೆಚ್.ಪಿ.ಶಿವಶಂಕರಗೌಡ, ವಲ್ಲಭಾಪುರ ಗ್ರಾಪಂ ಸದಸ್ಯ ಬಂಡಿಹಳ್ಳಿ ಸಾಲಿ ಹನುಮಂತಪ್ಪ, ಕಂಟ್ರಾಕ್ಟರ್ ವಿಜಯಕುಮಾರ, ಜಿಎಂ.ಶಂಕರ,

ಶ್ರೀನರೆಗಲ್ಲ್ ದುರುಗಮ್ಮದೇವಿ ಸೇವಾಸಮಿತಿಯ ಅಧ್ಯಕ್ಷರಾದ ಚಿಗರಿ ಮಾರುತಿ, ಉಪಾಧ್ಯಕ್ಷ ಗರಗದ ಪ್ರಕಾಶ, ಕಾರ್ಯದರ್ಶಿ ಹುಲುಗಪ್ಪ, ಸಹ ಕಾರ್ಯದರ್ಶಿ ರಾಚಣ್ಣನವರ ರಾಘು, ಖಜಾಂಚಿ ಹನುಮೇಶ, ಸದಸ್ಯರಾದ ಡ್ರೈವರ್ ಚಂದ್ರು, ಹುಗ್ಗಿಹುಲುಗಪ್ಪ, ಯುವ ನಾಯಕರಾದ ಪ್ಲಂಬರ್ ಮಾರುತಿ, ವಡ್ರ ಯಮುನಪ್ಪ, ಸೆರೆಗಾರ ಪರುಶ( ಕಣ್ಣ್) ಸಹಿತ ಹಲವು ಗಣ್ಯರು, ಅಧಿಕಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗಿ ಆಗಿ, ದೇವಿದರ್ಶನ ಪಡೆದುಕೊಂಡರು.

* ಗಮನ ಸೆಳೆದಹೊಳಿಗೆ ಊಟ:

ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರಿಗಾಗಿ ಬೆಳಗ್ಗಿನಿಂದಲೇ ಹೊಳಿಗೆ ಊಟದ ಪ್ರಸಾದದ ವ್ಯವಸ್ಥೆಯನ್ನು ದಾನಿಗಳ ಸಹಕಾರದೊಂದಿಗೆ ಮಾಡಿದ್ದು ಬಹು ವಿಶೇಷವಾಗಿತ್ತು. ಇದು
ಮಹಾಮಂಡಲಪೂಜೆಯ ಮೆರಗನ್ನು ಹೆಚ್ಚಿಸಿದ್ದಲ್ಲದೆ, ನರೆಗಲ್ಲ್ ದುರುಗಮ್ಮದೇವಿಯ ಪುನಃ ಪ್ರತಿಷ್ಠಾಪನೆಯ ವೈಭವವನ್ನು ಬಹು ವರ್ಷಗಳ ಕಾಲ ಜನರ ಬಾಯಿಯಲ್ಲಿ ನೆಲೆಗೊಳಿಸಿದ್ದಂತು ದಿಟವಿದೆ.

ಪಟ್ಟಣದ ಹೆಸರಾಂತ ಅಡುಗೆ ತಯಾರಕರಾದ ಶಿವಕುಮಾರ ಶೆಟ್ಟರ್ ನೇತೃತ್ವದಲ್ಲಿ ಎಪ್ಪತ್ತಕ್ಕೂ ಅಧಿಕ ಸಿಬಂದಿವರ್ಗದವರು ಭಕ್ತರಿಗಾಗಿ ಗರಿ,ಗರಿಯಾದ ಅತ್ಯಂತ ಸ್ವಾದಿಷ್ಟಕರ, ರುಚಿಕಟ್ಟಾದ ಬೆಳೆ ಹೂರಣದ ಹೊಳಿಗೆಯನ್ನು ಸಿದ್ದಪಡಿಸಿದ್ದರು.‌

ಮಲ್ಲಿಗೆ ಹೂವಿನಂತಹ ಅನ್ನ, ಇದಕ್ಕೆ ಬದನೆಕಾಯಿ ಪಲ್ಯ, ನುಗ್ಗೆಕಾಯಿ, ವಿವಿಧ ಸೊಪ್ಪು,ತರಕಾರಿ ಸಂಗಮದ ಸಂಬಾರ, ಹೊಳಿಗೆ ಊಟಕ್ಕೆ ಸಖತ್ ಸಾಥ್ ಒದಗಿಸಿದವು. ಬಿಸಿಲನ್ನು ಲೆಕ್ಕಿಸದೆಯೇ ಜನರು ಅದ್ಭುತ ಬ್ಯಾಟಿಂಗ್ ಮಾಡಿ, ಸಂತೃಪ್ತರಾದರು.

* ಐತಿಹಾಸಿಕ ನಾಣಿಕೇರಿ:

ಪಟ್ಟಣದ 1,19,20 ಹಾಗು 21 ನೇ ವಾರ್ಡ್ ಗಳಲ್ಲಿ ರಾಮನಗರದ ರೈತರ ಓಣಿ ಹರಡಿಕೊಂಡಿದೆ. ಇಲ್ಲಿನ ನಿವಾಸಿಗಳು ನಾಣಿಕೇರಿಯವರೆಂದು ಈಗಲೂ ಗುರುತಿಸಿಕೊಳ್ಳುತ್ತಾರೆ.

ಇನ್ನೂ ನಾಣಿಕೇರಿ ಎಂದರೇ, ಕರ್ನಾಟಕ, ಅಂಧ್ರ, ತೆಲಂಗಾಣ ಈ ತ್ರೀವಳಿ ರಾಜ್ಯಗಳಿಗೆ ಸೇರಿದ ಲಕ್ಷಾಂತರ ಹೆಕ್ಟೇರ್ ಬರಡು ಭೂಮಿಯನ್ನು ಹಚ್ಚ,ಹಸೀರಾಗಿಸಿ, ಅನ್ನದಾತರನ್ನು ಅರ್ಥಿಕ ಸಬಲರನ್ನಾಗಿಸಲು, ರಾಷ್ಟ್ರದ ಅಭಿವೃದ್ಧಿಗಾಗಿ ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಮುಳುಗಿರುವ ಐತಿಹಾಸಿಕ ನಗರ ನಾರಾಯಣದೇವರಕೆರೆಯ ಶಾರ್ಟ್ ಆದ ಹೆಸರೇ ನಾಣಿಕೇರಿ.

ರಾಷ್ಟ್ರದ ಒಳಿತಿಗಾಗಿ ಸರ್ವಸ್ವವನ್ನೂ ತ್ಯಾಗಮಾಡಿರುವ ಐತಿಹಾಸಿಕ ನಾರಾಯಣದೇವರಕೆರೆಯ ನಿವಾಸಿಗಳಿಗೆ ರಾಜ್ಯ ಸರ್ಕಾರ 1950ರ ದಶಕದಲ್ಲಿ ರಾಮನಗರದ ರೈತರ ಓಣಿಯಲ್ಲಿ ಪುನರ್ ವಸತಿ ಕಲ್ಪಿಸಿ ಕೊಟ್ಟಿದೆ. ಪಟ್ಟಣದ ರಾಮನಗರದ ರೈತರ ಓಣಿಯ ಶ್ರೀ ಮಾರುತಿ ಗರಡಿ ಮನೆ ಹತ್ತೀರ ನರೆಗಲ್ ದುರುಗಮ್ಮದೇವಿ ದೇವಸ್ಥಾನ ಇದೆ. ಪುನರ್ ವಸತಿಗೊಂಡಿರುವ ಜನರು ಈಗಲೂ ನಾವು ನಾಣಿಕೇರಿಯವರೆಂದೆ ಹೆಮ್ಮೆಪಟ್ಟುಕೊಂಡು ಗುರುತಿಸಿಕೊಳ್ಳುವ ಮೂಲಕ ಹಿನ್ನೀರಲ್ಲಿ ಮುಳುಗಿರುವ ಐತಿಹಾಸಿಕ ನಗರದ ಹಿರಿಮೆಯನ್ನು ಮುಂದಿನ ಪಿಳಿಗೆಗೆಯವರಿಗೂ ಉಳಿಸಿಕೊಂಡು ಬರುತ್ತೀದ್ದಾರೆ.

  • ಹುಳ್ಳಿಪ್ರಕಾಶ, ಸಂಪಾದಕರು.
    ———-+

.

,

.

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!