- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿ ನ್ಯೂಸ್, ಅ, 23
ಕೃಷ್ಣೆ,ತುಂಗಾಭದ್ರೆಯರ ಜೋಡಿ ನಾಡನ್ನು ಕಾವೇರಿಕೊಳ್ಳದ ರಾಜಧಾನಿಯೊಂದಿಗೆ ಸಂಪರ್ಕಿಸುವ ‘ ವಿಜಯಪುರ-ಯಶವಂತಪುರ’ ವಿಶೇಷ ರೈಲು ಹಳಿ ಮೇಲೆ ಓಡಾಟ ಶುರು ಮಾಡಿ ಅ, 22ಕ್ಕೆ ಐದು ವಸಂತಗಳು ಪೂರ್ಣಗೊಂಡವು.
ಪ್ರಾರಂಭದಲ್ಲಿ ಪ್ರಯಾಣಿಕರ ಸಾಕಷ್ಟು ಕೊರತೆಯನ್ನು ಎದುರಿಸಿ, ರೈಲನ್ನು ನಿಲ್ಲಿಸುವ ಹಂತಕ್ಕೂ ಪರಿಸ್ಥಿತಿ ವಿಷಮಿಸಿತ್ತು! ಆದರೇ ಟೈಮ್ ಟೇಬಲ್ ಬದಲಾಯಿಸಿದ ಮೇಲೆ ಪ್ರಯಾಣಿಕರು ಸಿಟಿಗಾಗಿ ವೇಯಿಟಿಂಗ್ ಲಿಸ್ಟ್ ಕಾಯುವಷ್ಟರ ಮಟ್ಟಿಗೆ ಈ ರೈಲು ನಿತ್ಯ ಭರ್ತಿಯಾಗಿಯೇ ಓಡಾಡುತ್ತಿದೆ.
ಅಕ್ಟೋಬರ್22, 2019 ರಂದು ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಅಲ್ಲಿನ ಸಂಸದರಾದ ರಮೇಶ ಜಿಗಜಿಣಿಗಿ ಅವರು ನೂತನ ವಿಜಯಪುರ-ಯಶವಂತಪುರ ನಡುವಿನ ಪ್ರಯಾಣಿಕರ ರೈಲಿನ ಓಡಾಟಕ್ಕೆ ಚಾಲನೆ ಕೊಟ್ಟರು. ಪ್ರಸ್ತುತ, ಬಯಲು ಮತ್ತುಬರದ ಸೀಮೆಯನ್ನು ಸಿಲಿಕಾನ್ ಸಿಟಿಯೊಂದಿಗೆ ಕೂಡಿಸುವ ಮಹತ್ವದ ರೈಲಾಗಿ ಇದು ಮಾರ್ಪಾಟ್ಟಿದೆ.
ಇತ್ತ, ಅಕ್ಟೋಬರ್22,2019 ರಂದು ಆದಿನ ರಾತ್ರಿ ಹೊಸಪೇಟೆ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ರೈಲನ್ನು ಅಂದಿನ ಸಂಸದರಾಗಿದ್ದ ವೈ.ದೇವೇಂದ್ರಪ್ಪ ಸ್ವಾಗತಿಸಿ, ಆ ರೈಲಿನಲ್ಲಿಯೇ ಹರಪನಹಳ್ಳಿ ಪಟ್ಟಣದ ತನಕವೂ ಪ್ರಯಾಣಿಸಿದರು.
ಈ ರೈಲು ಸಾಗುವ ಮಾರ್ಗ ಮಧ್ಯೆ ಬರುವ ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಮಾಲ್ವಿ, ಕೊಟ್ಟೂರು ನಿಲ್ದಾಣಗಳ್ಲಿ ಜನರು ಭಾರೀ ಸಂಖ್ಯೆಯಲ್ಲಿ ಕಾದಿದ್ದು ಹೊಸ ರೈಲನ್ನು ಸ್ವಾಗತಿಸಿದ್ದರು.
ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಬೆಳಗಿನ ಅವಧಿಯಲ್ಲಿ ಬೆಂಗಳೂರು ಕಡೆಗೆ, ಹುಬ್ಬಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ರೈಲುಗಳ ಓಡಾಟ ಶುರುವಾಗಬೇಕಾಗಿರುವುದು ಅಗತ್ಯವಿದೆ.
- ಹುಳ್ಳಿಪ್ರಕಾಶ, ಸಂಪಾದಕರು.