- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿನ್ಯೂಸ್, ಏಪ್ರಿಲ್,1
ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್
ಅವರ 134 ನೇ ಜನ್ಮದಿನಾಚರಣೆ ಹಾಗೂ ಹಸಿರುಕ್ರಾಂತಿಯ ಹರಿಕಾರರು, ದೇಶದ ಮಾಜಿ ಉಪಪ್ರಧಾನಿಗಳು ಆದ ಬಾಬು ಜಗಜೀವನರಾಂ ಅವರ 118ನೇ ಜಯಂತಿ ಆಚರಣೆ ನಿಮಿತ್ತವಾಗಿ ಏಪ್ರೀಲ್ ಎರಡು, ಬುಧವಾರ ಬೆಳಿಗ್ಗೆ 10-30ಕ್ಕೆ ಹಗರಿಬೊಮ್ಮನಹಳ್ಳಿ ತಾಪಂನ ಮಹಾತ್ಮಗಾಂಧಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ದತಾ ಸಭೆ ಜರುಗಲಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಲೂಕ ಅಧ್ಯಕ್ಷರು ಆಗಿರುವ ತಹಶಿಲ್ದಾರರು ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ಮಟ್ಟದ ಎಲ್ಲಾ ಇಲಾಖೆಗಳು ಮುಖ್ಯಸ್ಥರು, ದಲಿತಸಂಘಟನೆಗಳು ಸೇರಿದಂತೆ ಎಲ್ಲಾ ಸಂಘ,ಸಂಸ್ಥೆಗಳ ಮುಖಂಡರರುಗಳು, ಪಧಾಧಿಕಾರಿಗಳು ಸಭೆಗೆ ಆಗಮಿಸಿ ಬಂದು ಜಯಂತಿಯ ಯಶಸ್ವಿ ಆಚರಣೆಗೆ ಉಪಯುಕ್ತಸಲಹೆಗಳನ್ನು ನೀಡುವಂತೆ ಅವರು ಪತ್ರೀಕಾಪ್ರಕಟಣೆ ಮೂಲಕ ಕೋರಿದ್ದಾರೆ.