- ಹುಳ್ಳಿಪ್ರಕಾಶ, ಸಂಪಾದಕರು
- ಸುನಾಮಿನ್ಯೂಸ್
* ಹಗರಿಬೊಮ್ಮನಹಳ್ಳಿ, ಮಾರ್ಚ್,27
ಮಾರ್ಚ್ ಮಧ್ಯ ದಿಂದಲೇ ಬಿಸಿಲು ಕೆಂಡದುಂಡೆಯಾಗಿದ್ದು ಏಪ್ರೀಲ್ ವೇಳೆಗೆಲ್ಲ ಉಗ್ರಸ್ವರೂಪ ತಾಳುವ ಸಾಧ್ಯತೆಗಳು ಈಗಾಗಲೇ ದಟ್ಟೈಸಿವೆ. ಪಟ್ಟಣ ಸೇರಿದಂತೆ ಸುತ್ತಲಿನ ಊರುಗಳಲ್ಲಿ ನೀರಿನ ಕ್ಷಾಮದ ಮುನ್ಸೂಚನೆಗಳು ಕಾಣಿಸಿಕೊಂಡಿವೆ.
ಇಲ್ಲಿನ ಪುರಸಭೆಯ ಯುವ ಉತ್ಸಾಹಿ ಅಧ್ಯಕ್ಷ ಮರಿರಾಮಣ್ಣ ನೇತೃತ್ವದಲ್ಲಿನ ಮುನ್ಸಿಪಾಲ್ ಆಡಳಿತ ಬರಲಿರುವ ನೀರಿನ ಕ್ಷಾಮವನ್ನು ಎದುರಿಸಲು ಹೈ ಅಲರ್ಟ್ ಆಗಿದ್ದು, ಪಟ್ಟಣದ 23 ವಾರ್ಡ್ ಗಳಲ್ಲೂ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರವಹಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಇದರ ಭಾಗವಾಗಿ ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತೀರುವ ವಾಟರ್ ಫಿಲ್ಟರ್ ಗಳ ಮೂಲಕ ಉಚಿತ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಿದೆ.
ಈಗ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ತಾಲೂಕಿನ ಬನ್ನಿಗೋಳ ಗ್ರಾಮದ ಬಳಿ ನಿಲ್ಲುವ ತುಂಗಾಭದ್ರಾ ಜಲಾಶಯದ ಹಿನ್ನೀರಿನಲ್ಲಿರುವ ಜಾಕ್ ವೆಲ್ ಗೆ ಮುಖ್ಯಾಧಿಕಾರಿ ಎಂಕೆ.ಮುಗುಳಿ , ಇಂಜಿನಿಯರ್ ಹುಸೇನ್ ಸಾಬ್ ಸಮೇತ ಬುಧವಾರ ಭೇಟಿ ಕೊಟ್ಟು ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸಿದರು.
ಮುಂಗಾರು ಮಳೆಗಾಲ ಆರಂಭವಾಗುವ ತನಕವೂ ಪಟ್ಟಣದಲ್ಲಿ ಕುಡಿಯುವ ಮತ್ತು ಬಳಸುವ ನೀರಿನ ಸಮಸ್ಯೆ ಆಗದಂತೆ ಸೂಕ್ತ ಮುಂಜಾಗ್ರತೆವಹಿಸುವಂತೆಯೂ, ಜಾಕ್ ವೇಲ್ ನಲ್ಲಿ ನೀರಿನಕೊರತೆ ಆಗದಂತೆ ಎಚ್ಚರವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ತಾಪಂ ಮಾಜಿ ಸದಸ್ಯ ಬಿ.ದೇವೆಂದ್ರಪ್ಪ, ಮುಖಂಡರಾದ ಬನ್ನಿಗೊಳ ಆನಂದರೆಡ್ಡಿ, ಗುಂಡ್ರು ಹನುಮಂತಪ್ಪ ಸೇರಿ ಹಲವರು ಪರಿಶೀಲನೆ ಕಾಲಕ್ಕೆ ಅಧ್ಯಕ್ಷರ ಜೊತೆಯಲ್ಲಿದ್ರು.
- ಹುಳ್ಳಿಪ್ರಕಾಶ, ಸಂಪಾದಕರು.