Welcome to sunamipatrike   Click to listen highlighted text! Welcome to sunamipatrike
Monday, June 2, 2025
HomeUncategorizedಪೌರ ಮುಷ್ಕರ, ಜನತೆಗೆ ತೊಂದರೆ ; ಪರ್ಯಾಯದ ಬಗ್ಗೆ ಪ್ರತಿಕ್ರೀಯೆ ಕೇಳಿದ ಪತ್ರಕರ್ತರಿಗೆ ಅಧ್ಯಕ್ಷರನ್ನು ಕೇಳಿ...

ಪೌರ ಮುಷ್ಕರ, ಜನತೆಗೆ ತೊಂದರೆ ; ಪರ್ಯಾಯದ ಬಗ್ಗೆ ಪ್ರತಿಕ್ರೀಯೆ ಕೇಳಿದ ಪತ್ರಕರ್ತರಿಗೆ ಅಧ್ಯಕ್ಷರನ್ನು ಕೇಳಿ ಉತ್ತರಿಸುವೆ ಎಂದ ಕೊಟ್ಟೂರು ಮುನ್ಸಿಪಾಲ್ಟಿ ಮುಖ್ಯಾಧಿಕಾರಿ! ಇದು ಬೇಜವಾಬ್ದಾರಿ ನಡೆ ಎಂದ ಪತ್ರಕರ್ತರು!

* ಸುನಾಮಿನ್ಯೂಸ್, ಮೇ,28

ಮಂಗಳವಾರ ದಿಂದಲೇ ರಾಜ್ಯ ವ್ಯಾಪ್ತಿ ಪೌರ ಸೇವಾ ನೌಕರರು ಮುಷ್ಕರಕ್ಕೀಳಿದಿದ್ದು ಇದರಿಂದಾಗಿ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲೂ ಸ್ವಚ್ಚತಾ ಮತ್ತು ನೈರ್ಮಲ್ಯೀಕರಣದ ಜೊತೆಗೆ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಸಾಕಷ್ಟು ಅಡ್ಡಿ ಉಂಟಾಗಿ, ಜನರು ತೊಂದರೆ ಅನುಭವಿಸುವಂತಾಗುತ್ತಿದೆ.

ಶ್ರೀಗುರುಕೊಟ್ಟೂರೇಶ್ವರರ ನೆಲವೀಡು
ಕೊಟ್ಟೂರು, ರಾಜ್ಯದ ಪುಣ್ಯಕ್ಷೇತ್ರ ಹಾಗೂ ಪ್ರಮುಖ ಪ್ರವಾಸಿತಾಣವೂ ಹೌದು ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು, ಪ್ರವಾಸಿಗಳು ಭೇಟಿಕೊಡುತ್ತಾರೆ. ಬರುವಂತಹ ಭಕ್ತರು ಹಾಗೂ ಇಲ್ಲಿನ ನಾಗರೀಕರಿಗೆ ಮುಷ್ಕರದ ಬಿಸಿ ತಟ್ಟುವುದಂತೂ ನಿಜವಿದೆ.

ಹೀಗಾಗಿ ಪಟ್ಟಣ ಪಂಚಾಯ್ತಿ ಯಿಂದ ಪರ್ಯಾಯ ವ್ಯವಸ್ಥೆ ಏನಾದರೂ ಮಾಡಿಕೊಂಡಿದ್ದೀರಾ? ಎಂದು ಪ್ರಶ್ನಿಸಿದ ಪತ್ರಕರ್ತರಿಗೆ ಅಧ್ಯಕ್ಷರನ್ನು ಕೇಳಿ, ನಂತರ ಉತ್ತರಿಸುವುದಾಗಿ ಕೊಟ್ಟೂರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನೀಡಿದ ಪ್ರತಿಕ್ರೀಯೆ ಹಲವು ಪತ್ರಕರ್ತರು ಮತ್ತು ಮುಖ್ಯಾಧಿಕಾರಿ ನಡುವೆ ಬಿರುಸಿನ ಮಾತಿನ ವಾಗ್ವಾದಕ್ಕೂ, ಚಕಮಕಿಗೂ ಅಸ್ಪದ ಕಲ್ಪಿಸಿಕೊಟ್ಟ ಘಟನೆ ಮಂಗಳವಾರ ಕೊಟ್ಟೂರು ಪಟ್ಟಣ ಪಂಚಾಯ್ತಿ ಕಚೇರಿ ಆವರಣದಲ್ಲಿ ನಡೆದಿರುವುದು ವರದಿಯಾಗಿದೆ.

ನಾವು ನಮಗಾಗಿಯಲ್ಲ, ಶ್ರೀಕ್ಷೇತ್ರ ಕೊಟ್ಟೂರು ಪಟ್ಟಣದ ಸ್ವಚ್ಚತೆ, ಇಲ್ಲಿನ ಜನತೆಯ ಹಿತಾರಕ್ಷಣೆಯ ಕಾಳಜಿ ಯಿಂದ ಪ್ರತಿಕ್ರೀಯೆ ಬಯಸಿ ಪಪಂ ಕಚೇರಿಗೆ ಹೋದಾಗ ನಮ್ಮ ಜೊತೆಗೆ ಸೌಜನ್ಯಕ್ಕೂ ಕೂಡ ಸ್ಪಂದಿಸದೇ ನಾವು ಏನೇ ಕೇಳಿದರೂ ಎಲ್ಲದಕ್ಕೂ ಮುಖ್ಯಾಧಿಕಾರಿಗಳು ಪಪಂ ಅಧ್ಯಕ್ಷರ ಕಡೆಗೆ ಬೆರಳು ತೋರಿಸಿದರೇ ಹೊರತು ನಾಗರೀಕರ ಕಾಳಜಿ ಇಟ್ಟುಕೊಂಡು ನಾವು ಎತ್ತಿದ ಯಾವುದೇ ಪ್ರಶ್ನೆಗೂ ಕಿಂಚಿತ್ ಸ್ಪಂದಿಸದೇ ಮುಖ್ಯಾಧಿಕಾರಿ ಬೇಜವಾಬ್ದಾರಿ ತೋರಿದ್ದಾರೆಂದು ಕರ್ನಾಟಕ ಪತ್ರಕರ್ತರ ಸಂಘದ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೊಂದೆಯಲ್ಲ ಹಲವು ಸಲವೂ ನಮ್ಮ ಪ್ರಶ್ನೆಗಳಿಗೆ ಮುಖ್ಯಾಧಿಕಾರಿಗಳು ಸಮರ್ಪಕವಾಗಿ ಉತ್ತರಿಸುವುದಿಲ್ಲ. ಹೀಗಾಗಿ
ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು(ಪಿಡಿ) ಅವರ ಗಮನಕ್ಕೆ ಈ ವಿಚಾರವನ್ನು ತರುವುದಾಗಿ ಕರ್ನಾಟಕ ಪತ್ರಕರ್ತರ ಸಂಘದ ಕೊಟ್ಟೂರು ತಾಲೂಕ ಸಮಿತಿಯ ಹಲವು ಸದಸ್ಯರು “ಸುನಾಮಿನ್ಯೂಸ್” ಗೆ ತಿಳಿಸಿದ್ದಾರೆ.

ಅನಿರ್ದಿಷ್ಟಾವಧಿ ಮುಷ್ಕರ:

ಪೌರ ಸೇವಾ ಸಿಬ್ಬಂದಿಗಳನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ಇನ್ನೀತರೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯವನ್ನು ಸರಕಾರವನ್ನು ಒತ್ತಾಯಿಸಿ ರಾಜ್ಯ ಪೌರ ನೌಕರರ ಸೇವಾ ಸಂಘದಡಿ ರಾಜ್ಯ ವ್ಯಾಪಿ ಮಂಗಳವಾರ ದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದ್ದು ಈ ಮುಷ್ಕರವನ್ನು ಬೆಂಬಲಿಸಿ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣಪಂಚಾಯ್ತಿ ಕಚೇರಿ ಮುಂದೆಯೂ ಇಲ್ಲಿನ ಪೌರ ಸೇವಾ ನೌಕರರು ಹೋರಾಟಕ್ಕೀಳಿದಿದ್ದಾರೆ.

ಹಲವು ಸಲ ಮನವಿ ಮಾಡಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ನೀರು ಸರಬರಾಜು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಿ ಮೇ ೨೭ ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೌರ ನೌಕರರ ಸಂಘದ ಕೊಟ್ಟೂರು ತಾಲೂಕು ಅಧ್ಯಕ್ಷ ಎಂ.ಕೊಟ್ರೇಶ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಿದಂತೆ ಹಾಗೂ ಮೊದಲೇ ಸರ್ಕಾರಕ್ಕೆ ತಿಳಿಸಿದಂತೆ ಈ ಮುಷ್ಕರವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದ ಅವರು ಖಾಲಿ ಇರುವ ನೌಕರರ ಹುದ್ದೆಗಳ ನೇಮಕಾತಿ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ವಾಹನಗಳಿಗೆ ಚಾಲಕರ ಹುದ್ದೆಗಳನ್ನು ಮಂಜೂರು ಮಾಡುವುದು, ಖಾಯಂ ಆಕೌಂಟೆಂಟ್ ಹುದ್ದೆ ಮತ್ತು ಇತರೆ ೧೯ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

ಕೊಟ್ಟೂರು ಪಪಂ ಕಚೇರಿ ಮುಂಭಾಗದಲ್ಲಿ ಸಂಘದ ಪೌರಕಾರ್ಮಿಕರು ಸೇರಿದಂತೆ ಪದಾಧಿಕಾರಿಗಳು, ಪೌರ ಕಾರ್ಮಿಕ ಸದಸ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆ. ಕಚೇರಿ ಕೆಲಸಗಳು ಸೇರಿ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.ಈ ಮುಷ್ಕರದ ಹಿನ್ನೆಲೆಯಿಂದ ಸ್ಥಳೀಯ ಸಾರ್ವಜನಿಕರಿಗೆ
ಅಡಚಣೆ ಉಂಟಾಗಲಿದೆ ಎನ್ನುವುದು ನಮಗೆ ಗೊತ್ತಿದೆ ಆದರೇ ನಿರಂತರ ಜನರ ಸೇವೆ ಮಾಡುತ್ತೀರುವ ನಮಗೆ ಸಾಕಷ್ಟು ಸಮಸ್ಯೆಗಳು ಕಾಡುತ್ತೀವೆ. ನಮ್ಮ ಹೋರಾಟ ನ್ಯಾಯಯುತವಾಗಿದ್ದು ಪಟ್ಟಣದ ಜನತೆ ನಮ್ಮ ಹೋರಾಟಕ್ಕೆ ಸಹಕಾರ ನೀಡಿ, ನೈತಿಕ ಬೆಂಬಲ ನೀಡಬೇಕೆಂದು ಪತ್ರಕರ್ತರ ಮೂಲಕ ಸಂಘದ ಅಧ್ಯಕ್ಷ ಎಂ.ಕೊಟ್ರೇಶ ಪಟ್ಟಣದ ಜನತೆಯಲ್ಲಿ ಮನವಿ ಮಾಡಿಕೊಂಡರು.

ಸಂಘದ ಉಪಾಧ್ಯಕ್ಷ ಎಚ್.ಶಂಕ್ರಪ್ಪ, ಕಾರ್ಯದರ್ಶಿ ಎ.ಮಂಜುನಾಥ, ಖಜಾಂಚಿ ಎಸ್.ಪರುಸಪ್ಪ, ಸಂಘಟನಾಕಾರ್ಯದರ್ಶಿ ಎನ್.ವಿಜಯಕುಮಾರ, ಬಿ.ರವಿ, ಬಿ.ರಮೇಶ ನಿರ್ದೇಶಕರಾದ ಸುಭದ್ರಮ್ಮ, ಸುಮಿತ್ರಮ್ಮ, ಒಟ್ಟು ೬೦ ಜನ ಪೌರಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.

  • ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು. .
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!