- ಸುನಾಮಿನ್ಯೂಸ್, ಮೇ31
ಹೊಸಪೇಟೆ ನಗರಸಭೆ ಜೊತೆಗೆ ಇಡೀ ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಪೌರ ಸೇವಾ ನೌಕರರ ಸಂಘದ ಪದಾಧಿಕಾರಿಗಳು ಸಿಬ್ಬಂದಿಗಳ ಜೊತೆಗೆ ನಾವಿದ್ದೇವೆ ಎಂದು ಮುಷ್ಕರ ನಿರತ ಪೌರ ಕಾರ್ಮಿಕರಿಗೆ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮಾಜಿಶಾಸಕರು ಆದ ಸಿರಾಜ್ ಶೇಖ್ ಅವರು ಹೋರಾಟ ಬೆಂಬಲಿಸಿ, ಮುಷ್ಕರ ನಿರತರಿಗೆ ನೈತಿಕ ಬೆಂಬಲವನ್ನೂ ಸಹ ವ್ಯಕ್ತಪಡಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಪೌರ ಸೇವಾ ನೌಕರರು ಮಂಗಳವಾರ ದಿಂದಲೇ ಅನಿರ್ದಿಷ್ಟಾವಧಿಯ ಹೋರಾಟವನ್ನು ರಾಜ್ಯ ವ್ಯಾಪ್ತಿ ಆರಂಭಿಸಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಹೊಸಪೇಟೆ ನಗರಸಭೆ ಆವರಣದಲ್ಲೂ ಪೌರ ಸೇವಾ ನೌಕರರು ಮುಷ್ಕರ ನಿರತರಾಗಿದ್ದಾರೆ.
ಶುಕ್ರವಾರ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಜೊತೆಗೂಡಿ ಸಿರಾಜ್ ಶೇಖ್ ಅವರು ಹೋರಾಟದ ಟೆಂಟ್ ಗೆ ಭೇಟಿಕೊಟ್ಟು, ಮುಷ್ಕರ ನಿರತರಿಗೆ ನೈತಿಕ ಬೆಂಬಲ ಕೊಟ್ಟಿದ್ದಲ್ಲದೆ ಅಲ್ಲಿಂದಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಆಹ್ಮದ್ ಖಾನ್, ಪೌರಾಡಳಿತ ಸಚಿವರಾದ ರಹೀಂಖಾನ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ಹೋರಾಟ ದಿಂದಾಗಿ ಸಾರ್ವಜನಿಕ ಸೇವೆಯಲ್ಲಿ ಆಗುತ್ತೀರುವ ತೊಂದರೆಗಳ ಬಗ್ಗೆ ಗಮನಕ್ಕೆ ಹಾಕಿ, ತಕ್ಷಣ ಪೌರ ಸೇವಾ ನೌಕರರ ಬೇಡಿಕೆಗಳ ಕಡೆಗೆ ಗಮನಹರಿಸುವಂತೆ ವಿನಂತಿಸಿದರು.
ನಿಮ್ಮ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲು ನಾನು ಸರ್ಕಾರದ ಮಟ್ಟದಲ್ಲಿ ಸಚಿವರು ಗಮನಕ್ಕೆ ತರುವುದರ ಜೊತೆಗೆ
ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನಗರಸಭೆಗೆ ಕರೆಯಿಸಿ ನಿಮ್ಮ ಜೋತೆ ಸಭೆಯನ್ನು ಆಯೋಜನೆ ಮಾಡುವುದಾಗಿ ಸಿರಾಜ್ ಶೇಖ್ ಮುಷ್ಕರ ನಿರತರಿಗೆ ಭರವಸೆ ಕೊಟ್ಟರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೆ ಎಂ ಹಾಲಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಕೆ ರಮೇಶ್, ಜಿಲ್ಲಾ ಸೇವಾದಳ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಮುಖಂಡರಾದ ತಾರಾ ಭಾಷ , ಪೀರಾ ಸಾಬ್, ಹೆಚ್ ಪರಶುರಾಮ, ಖಾಜಾ ಹುಸೇನ್, ಕಾರ್ಮಿಕ ವಿಭಾಗದ ಅಧ್ಯಕ್ಷ ಎಂ.ಡಿ.ರಫೀಕ್ , ಧನರಾಜ್, ಹೊನ್ನಪ್ಪ ಮತ್ತಿತರರು ಜಿಲ್ಲಾಧ್ಯಕ್ಷರ ಜೊತೆಗಿದ್ದರು.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿನ್ಯೂಸ್, ಬೆಂಗಳೂರು.