Welcome to sunamipatrike   Click to listen highlighted text! Welcome to sunamipatrike
Thursday, May 22, 2025
HomeUncategorizedಕೇಂದ್ರದ ವಿರುದ್ಧ ‘ಕ್ರೀಸ್ ಗೇಲ್’ ಬ್ಯಾಟಿಂಗ್ ತರಹ ಅಬ್ಬರಿಸಿದ ಬಳ್ಳಾರಿ ಸಂಸದ ತುಕಾರಾಂ!

ಕೇಂದ್ರದ ವಿರುದ್ಧ ‘ಕ್ರೀಸ್ ಗೇಲ್’ ಬ್ಯಾಟಿಂಗ್ ತರಹ ಅಬ್ಬರಿಸಿದ ಬಳ್ಳಾರಿ ಸಂಸದ ತುಕಾರಾಂ!

ಹುಳ್ಳಿಪ್ರಕಾಶ, ಸಂಪಾದಕರು

ಸುನಾಮಿನ್ಯೂಸ್

ಹೊಸಪೇಟೆ,ಆ,19
ನಮ್ಮ ಸಿಎಂ ಸಿದ್ದರಾಮಯ್ಯನವರು ಎರಡನೇಯ ದೇವರಾಜ ಅರಸು. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಅವರ ಮೇಲೆ ಕುತಂತ್ರ ದಿಂದ ಪ್ರಾಸಿಕ್ಯೂಷನ್ ಮಾಡಿಸಿದೆ ಎಂದು ಬಳ್ಳಾರಿ ಲೋಕಸಭಾ ಸದಸ್ಯರಾದ ಈ.ತುಕಾರಾಂ ಆರೋಪಿಸಿದ್ದಾರೆ.

ಬಿಜೆಪಿಯವರು ಸಿದ್ದರಾಮಯ್ಯ ವಿರುದ್ಧ ಮಾಡಿರುವ ಪ್ರಾಸಿಕ್ಯೂಷನ್ ಕುತಂತ್ರ ರಾಜಕಾರಣದಲ್ಲಿ ನಮ್ಮ ಸಾಹೇಬ್ರು ಗೆದ್ದೇ, ಗೆಲುತ್ತಾರೆ, ಆ ಮೂಲಕ ನಮ್ಮ ಕರ್ನಾಟಕ ದಿಂದಲೇ ಬಿಜೆಪಿಯವರ ಕುತಂತ್ರ ರಾಜಕಾರಣ ಬಂದ್ ಆಗುತ್ತೆ. ಆಗೇನೆ ರಾಜ್ಯಪಾಲರ ಸಂವಿಧಾನ ವಿರೋಧಿ ನಡೆಯು ಇಲ್ಲಿಂದಲ್ಲೇ ಅವನತಿಹೊಂದುತ್ತೇ ಎಂದು ಕೇಂದ್ರದ ವಿರುದ್ಧವಾಗಿ ಸಂಸದರು ಜೋರಾಗಿಯೇ ಅಬ್ಬರಿಸಿದ್ದಾರೆ.

ಸೋಮವಾರ ಮಧ್ಯಾಹ್ನ ನಗರದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕರೆಕೊಟ್ಟಿದ್ದ’ ಸಿದ್ದರಾಮಯ್ಯ ಮೇಲಿನ ಪ್ರಾಸಿಕ್ಯೂಷನ್ ವಾಪಾಸು ಪಡೆಯಬೇಕು, ರಾಜ್ಯಪಾಲರನ್ನು ವಜಾ ಮಾಡಬೇಕು’ ಎಂದು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ, ಬಳಿಕ ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ಜರುಗಿದ ಬಹಿರಂಗಸಭೆಯನ್ನುದ್ದೇಶಿಸಿ ಸಂಸದರು ಮಾತನಾಡಿದರು.

ರಾಜ್ಯಪಾಲರ ನಡೆಯನ್ನು ವಿರೋಧಿಸಿ
ಇವತ್ತು ರಾಜ್ಯವ್ಯಾಪ್ತಿ ಆರಂಭವಾಗಿರುವ ಹೋರಾಟ, ಪ್ರಾಸಿಕ್ಯೂಷನ್ ವಾಪಾಸು ಪಡೆಯುವ ತನಕವು ನಿರಂತರವಾಗಿರುತ್ತೆ. ಎದೆಗುಂದದೆ ದಿಟ್ಟತನದ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಬೇಕಾಗಿದೆ. ನಮ್ಮ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಕಳಂಕ ನಿವಾರಣೆ ತನಕವೂ ನಮ್ಮ ಹೋರಾಟಕ್ಕೆ ವಿರಾಮವಿಲ್ಲ ಎಂದು
ಸಭೆಯ ಮೂಲಕ ಹೋರಾಟಕ್ಕೆ ಸಿದ್ದವಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸಂಸದರು ಕರೆ ಕೊಟ್ಟರು.

ಪಂಚಗ್ಯಾರಂಟಿಗಳ ಜಾರಿಯಿಂದ ಜನಪರ ಆಡಳಿತ ನೀಡುವ ಮೂಲಕ ಸಿದ್ದರಾಮಯ್ಯ ಗಳಿಸಿರುವ ಜನಪ್ರೀಯತೆಯನ್ನು ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್ ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದ ಸಂಸದರು, ಈ ಕಾರಣಕ್ಕೇನೆ ಸಿದ್ದರಾಮಯ್ಯ ಅವರನ್ನು ತಪ್ಪಿಸ್ಥರನ್ನಾಗಿಸಲು ರಾಜ್ಯಪಾಲರನ್ನು ಮುಂದಿಟ್ಡುಕೊಂಡು ಪ್ರಾಸಿಕ್ಯೂಷನ್ ಬಲೆ ನೇಯುವ ಕೆಲಸಮಾಡಿದ್ದಾರೆಂದು ಕೇಂದ್ರದ ತೀವ್ರ ವಾಗ್ದಾಳಿ ನಡೆಸಿದರು.

ತಪ್ಪೇ ಮಾಡದ ನಮ್ಮ ಸಿಎಂ ಮೇಲೆ ನೀಡಿರುವ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡ ಸಂಸದರು, ಈ ಕೂಡಲೇ ರಾಜ್ಯಪಾಲರು ತಾವು ಅನುಮತಿ ನೀಡಿರುವ ಪ್ರಾಸಿಕ್ಯೂಷನ್ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಪ್ರಾಸಿಕ್ಯೂಷನ್ ವಾಪಾಸು ಪಡೆಯದಿದ್ದರೇ
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಇಲ್ಲಿನ ರಾಜ್ಯಪಾಲರ ಅವನತಿ ಎರಡು
ಕರ್ನಾಟಕ ದಿಂದಲೇ ಆರಂಭವಾಗಲಿದೆ ಎಂದು ಬಳ್ಳಾರಿ ಸಂಸದ ತುಕಾರಾಂ ಬಹಿರಂಗಸಭೆಯ ಮೂಲಕವೇ ಕೇಂದ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟರು.

ರಾಹುಲ್ ದ್ರಾವಿಡ್ ರಂತೆ ಸ್ಲೋ ಬ್ಯಾಟಿಂಗ್ ತರಹನೇ ಸೌಮ್ಯ ಮಾತುಗಳಿಗೆ ಹೆಸರಾದ ತುಕಾರಾಂ, ಯಾಕೋ ಇಂದು ಮಾತ್ರ ಟಿ20 ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮೈದಾನದ ಸುತ್ತಲೂ ಸಿಕ್ಸರ್ ಗಳ ಸುರಿಮಳೆ ಸುರಿಸುವ ತರಹವೇ ರಾಜ್ಯಪಾಲರ ನಡೆಯ ವಿರುದ್ಧವಾಗಿ, ಕೇಂದ್ರ ಸರ್ಕಾರದ ಕುತಂತ್ರದ ವಿರುದ್ಧವಾಗಿ ಜೋರಾಗಿಯೇ ಅಬ್ಬರಿಸಿದ್ದು ವಿಶೇಷವಾಗಿತ್ತು.

ತುಕಾರಾಂ ಅವರ ಬೆಂಕಿಚೆಂಡಿನಂತೆ ಹೊರಬರುತ್ತಿದ್ದ ಖಡಕ್ ಮಾತುಗಳು
ನೆರೆದಿದ್ದ ಕಾರ್ಯಕರ್ತರಲ್ಲಿ ಪ್ರಾಸಿಕ್ಯೂಷನ್ ವಿರುದ್ಧದ ಹೋರಾಟಕ್ಕೆ ಕಿಡಿಹೊತ್ತಿಸಿತು ಎನ್ನುವುದನ್ನು ತುಕಾರಾಂ ಮಾತು ಮುಗಿಸುವ ವರೆಗೂ ಕೇಳಿಬಂದ ಶಿಳ್ಳೆ,ಕೇಕೆ,ಚಪ್ಪಾಳೆಗಳು ಸಾಬೀತು ಪಡಿಸಿದವು.

ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ, ಮಾಜಿ ಸಚಿವ ಪಿಟಿ.ಪರಮೇಶ್ವರನಾಯ್ಕ್, ಹರಪನಹಳ್ಳಿ ಶಾಸಕಿ ಎಂಪಿ.ಲತಾಮಲ್ಲಿಕಾರ್ಜುನ, ವಿಜಯನಗರ ಡಿಸಿಸಿ ಅಧ್ಯಕ್ಷ ಸಿರಾಜ್ ಶೇಕ್, ಉಪಾಧ್ಯಕ್ಷ ಗಾದಿಗನೂರು ಹಾಲಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಲಾಕ್ ಸಮಿತಿಗಳ ಅಧ್ಯಕ್ಷರು, ಮುಖಂಡರುಗಳು ಬಹಿರಂಗಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!