- ಹುಳ್ಳಿಪ್ರಕಾಶ, ಸಂಪಾದಕರು
* ಸುನಾಮಿ ನ್ಯೂಸ್, ಸಂಡೂರು, ಅ,16
ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಸಂಡೂರು ವಿಧಾನಸಭಾ ಕ್ಷೇತ್ರದ ರಾಜಕಾರಣ ಇದ್ದಕ್ಕಿದ್ದಂತೆಯೇ ಸಾಕಷ್ಟು ಬಿಜಿ ಆಗಿದೆ.
ಇದೇ ಮೊದಲ ಬಾರಿಗೆ ಉಪ ಸಮರದಲ್ಲಿ ತನ್ನ ಅದೃಷ್ಟ ಪರೀಕ್ಷೆಗಿಳಿಯಲು ಸಿಪಿಐಎಂ ಪಕ್ಷ ಅಂದರೇ ಭಾರತ ಕಮ್ಯುನಿಸ್ಟ್ ಪಕ್ಷ( ಮಾರ್ಕ್ಸ್ ವಾದಿ) ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿ ಇದೆ.
ಸ್ಪರ್ಧೆಯ ಸಂಬಂಧವಾಗಿ ಈಗಾಗಲೇ ಸ್ಥಳಿಯ ಶಾಖೆಗಳಿಂದ ಬಂದಿರುವ ಅಭಿಪ್ರಾಯಗಳನ್ನು ಜಿಲ್ಲಾ ಸಮಿತಿ ಮೂಲಕ ರಾಜ್ಯ ಸಮಿತಿಗೆ ಕಳುಹಿಸಿದ್ದು, ರಾಜ್ಯ ಸಮಿತಿಯಿಂದ ಯಾವ ನಿರ್ಧಾರ ಬರುತ್ತದೆ ಎನ್ನುವುದರತ್ತ ಇಲ್ಲಿನ ಮಾರ್ಕ್ಸ್ ವಾದಿ ಕಾರ್ಯಕರ್ತರು ಕುತೂಹಲಿಗಳಾಗಿದ್ದಾರೆ.
ಪ್ರಸ್ತುತ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ಸಂಡೂರು ಕ್ಷೇತ್ರದ ನಿವಾಸಿ, ಮತದಾರರು ಹೌದಾಗಿದ್ದು ಉಪ ಸಮರದಲ್ಲಿ ಪಕ್ಷ ದಿಂದ ಅಭ್ಯರ್ಥಿಯನ್ನು ಕಣಕ್ಕೀಳಿಸಲು ಸ್ವತಹ ಬಸವರಾಜಗೂ ಅಸಕ್ತಿ ಇದೆ ಎನ್ನುವ ಕಾರಣಕ್ಕೇನೆ ಸಿಪಿಐಎಂ ಪಕ್ಷದ ಸ್ಪರ್ಧೆ ಸದ್ಯ ಮುಂಚೂಣಿಗೆ ಬಂದು ನಿಲ್ಲುವಂತಾಗಿದೆ.
ಒಂದು ವೇಳೆ ಸ್ಪರ್ಧೆಗೆ ಸ್ಟೇಟ್ ಕಮಿಟಿ ಗ್ರೀನ್ ಸಿಗ್ನಲ್ ಕೊಟ್ರೇ ಬಹು ದಶಕಗಳ ನಂತರ ಲೋಹಾದ್ರಿ ನಾಡಿನ ಚುನಾವಣಾ ಕಣದಲ್ಲಿ ‘ ರೆಡ್ ಪ್ಲಾಗ್’ ಪಟ,ಪಟಿಸಲಿದೆ. ಕೆಂಪಾಗಿ ಕಾಮ್ರೇಡ್ ಗಳು ಡೋರ್ ಟು ಡೋರ್ ಮತ ಕೇಳಲು ಬೀದಿಗಿಳಿಯಲಿದ್ದಾರೆ.
ಆಡಳಿರೂಢ ಕಾಂಗ್ರೆಸ್ ಮತ್ತು ವಿರೋಧಿ ಬಿಜೆಪಿ ಪಕ್ಷಗಳನ್ನು ಸೋಲಿಸುವಷ್ಟು ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷ ಪ್ರಬಲವಾಗಿಲ್ಲ. ರಾಜಕೀಯವಾಗಿ ಸಂಡೂರು ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದ ಬೇರುಗಳು ಸ್ಟ್ರಾಂಗ್ ಇಲ್ಲ. ಆದರೇ ಇತ್ತಿಚಿಗೆ ಕುಡತಿನಿ ಭಾಗದಲ್ಲಿ ಆರಂಭವಾಗಿರುವ ಭೂ ಹೋರಾಟಗಳು ಸಿಪಿಐಎಂ ಪಕ್ಷದ ಬೇರುಗಳನ್ನು ಸಾರ್ವಜನಿಕರ ಮಧ್ಯೆ ದೃಢವಾಗಿಸಿರುವುದಂತು ದಿಟವಿದೆ.
.
ಆಗೇ ನೋಡಿದರೇ, ಒಂದು ಕಾಲದಲ್ಲಿ ಸಂಡೂರು ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷಕ್ಕಿಂತಲೂ ರಾಜಕೀಯವಾಗಿ ಸಿಪಿಐ ಪಕ್ಷದ ಬೇರುಗಳು ಅಳಕ್ಕೀಳಿದಿದ್ದವು. 1985ರಲ್ಲಿ ಜರುಗಿದ ಅಸೆಂಬ್ಲಿ ಎಲೇಕ್ಷನ್ ನಲ್ಲಿ ಆಗ ಸಿಪಿಐ ಪಕ್ಷ ದಿಂದ ಕಣಕ್ಕೀಳಿದಿದ್ದ ತೊರಣಗಲ್ಲು ಗ್ರಾಮದ ಯುವ ಹೋರಾಟಗಾರ ಉಪ್ಪಾರ ಭೂಪತಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಮಾಜಿ ಸಂಸದ ಕೆಎಸ್.ವೀರಭದ್ರಪ್ಪ ಅವರನ್ನು ಹೀನಾಯವಾಗಿ ಸೋಲಿಸಿದಾಗ ಇಡೀ ಕರ್ನಾಟಕ ರಾಜಕಾರಣವೇ ಅಚ್ಚರಿ ಆಗಿತ್ತು.
ಆದರೇ ಶಾಸಕತ್ವದ ಅವಧಿ ನಂತರ ಯು.ಭೂಪತಿ, ಜೊತೆಗೆ ಅವತ್ತಿನ ಗಟ್ಟಿ ವಿದ್ಯಾರ್ಥಿ ನಾಯಕರಾಗಿದ್ದ ಎಐಎಸ್ ಎಫ್ ರಾಜ್ಯ ಮುಖಂಡರು ಆಗಿದ್ದ ಕೊಟ್ಟೂರಿನ ಅಬ್ದುಲ್ ಗನಿ ಕಾಂಗ್ರೆಸ್ ಪಕ್ಷದ ಸೇರ್ಪಡೆಯೊಂದಿಗೆ ಸಂಡೂರು ಕ್ಷೇತ್ರದಲ್ಲಿ ‘ ಕುಡುಗೋಲು ತೆನೆ’ಯ ಬಾವುಟ ಬಣ್ಣ ಕಳೆದುಕೊಳ್ಳಲಾರಂಭಿಸಿತು. ಆ ಜಾಗದಲ್ಲೀಗಾ
‘ ಕುಡುಗೋಲು ಸುತ್ತಿಗೆ ಮತ್ತು ನಕ್ಷತ್ರ’ದ ಬಾವುಟಗಳು ಪಟ,ಪಟಿಸಲಾರಂಭಿಸಿವೆ.
ಒಂದು ವೇಳೆ ಸಿಪಿಐಎಂ ಪಕ್ಷದ ಸ್ಪರ್ಧೆ ಯಿಂದ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಗೆ ಯಾವುದೇ ಅಡ್ಡ ಪರಿಣಾಮಕ್ಕಿಂತಲೂ ಕಾಂಗ್ರೆಸ್ ವಿರೋಧಿ ಮತ ಬ್ಯಾಂಕಿಗೆ ಹೆಚ್ಚು ಹಾನಿ ಎನ್ನುವುದು ಈ ಹೊತ್ತೀನ ಲೋಹಾದ್ರಿ ಸೀಮೆಯ ವರ್ತಮಾನದ ರಾಜಕೀಯ ವಿಶ್ಲೇಷಣೆಯು ಹೌದಾಗಿದೆ.
- ಹುಳ್ಳಿಪ್ರಕಾಶ, ಸಂಪಾದಕರು.