- ಹುಳ್ಳಿಪ್ರಕಾಶ, ಸಂಪಾದಕರು
- ಸುನಾಮಿ ನ್ಯೂಸ್,
ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಂಸದರಾದ ಈ.ತುಕಾರಾಂ ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂದು ಎದ್ದಿದ ಅಪಸ್ವರದ ಮಧ್ಯೆ ಪಕ್ಷದ ಹೈಕಮಾಂಡ್ ತುಕಾರಾಂ ಪರ ಬೆನ್ನಿಗೆ ನಿಂತಿರುವ ಸುದ್ದಿಗಳು ರಾಜಧಾನಿ ತುಂಬನೂ ಜೋರಾಗಿವೆ.
ಸಂಸದರ ಪತ್ನಿ ಅನ್ನಪೂರ್ಣಮ್ಮನವರನ್ನು ಕಣಕ್ಕೀಳಿಸಲು ಹೈಕಮಾಂಡ್ ನಿರ್ಧರಿಸಿ ಆಗಿದ್ದು, ಇತ್ತ ಚನ್ನಪಟ್ಟಣ, ಶಿಗ್ಗಾಂವ ಕಗ್ಗಂಟು ಬಗೆಹರಿಯುವ ಹಂತದಲ್ಲಿದ್ದು ಸೋಮವಾರದೊಳಗಡೆ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಎಐಸಿಸಿ ಅಧಿಕೃತವಾಗಿ ಅಖೈರುಗೊಳಿಸುತ್ತದೆ ಎನ್ನುವ ಮಾಹಿತಿ ಈಗಾಗಲೇ ದೆಹಲಿ ಯಿಂದ ಕೆಪಿಸಿಸಿಗೆ ಬಂದಿದೆ.
ಇದ್ದಕ್ಕಿದ್ದಂತೆಯೇ ತಮ್ಮ ವಿರುದ್ಧವಾಗಿ ಸ್ಪೋಟ್ ಗೊಂಡಿದ್ದ ಅಪಸ್ವರ ದಿಂದಾಗಿ ಕಳೆಗುಂದಿದ್ದ ಸಂಸದರ ಮುಖದಲ್ಲಿ ಹೈಕಮಾಂಡ್ ತಮ್ಮ ಬೆಂಬಲಕ್ಕೀದೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಶನಿವಾರದ ರಾತ್ರಿ ವೇಳೆಯಲ್ಲು ಅವರ ಮುಖದಲ್ಲಿ ಮಂದಹಾಸ ಮುಡಿದ್ದು ಎದ್ದು ಕಾಣಿಸುತ್ತಿತ್ತು.
ಧಾರವಾಡ ಉಸ್ತುವಾರಿ ಸಚಿವ ಸಂತೋಷ ಲಾಡ್ ಜೊತೆಗೆ ಅತೃಪ್ತರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ
ಕೈ ಪಕ್ಷದ ಹೈಕಮಾಂಡ್, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಿರಂತರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ, ಗಣಿನಾಡಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಃ ವಿಜಯ ವೇದಿಕೆ ಹತ್ತೀಸಿರುವ ಸಂಸದ ಈ.ತುಕಾರಾಂ ಅವರ ಪರವಾಗಿದೆ ಎನ್ನುವುದು ಪಕ್ಕಾವಾಯ್ತು.
ಟಿಕೆಟ್ ವಿಚಾರದಲ್ಲಿ ಏನೇ ಅಪಸ್ವರ ಇರಲಿ, ಆದರೇ ಸಿಎಂ ಸಿದ್ದರಾಮಯ್ಯ ಸಹಿತ ಕಾಂಗ್ರೆಸಿನ ದೆಹಲಿಯ ವರಿಷ್ಠರು ಕಷ್ಟ ಕಾಲದಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡಿ, ಬಳ್ಳಾರಿಯಲ್ಲಿ ಅಳಕ್ಕೆ ಬೇರೂರಿದ್ದ ಕಮಲವನ್ನು ಕಿತ್ತೋಗೆದು, ಜಯಭೇರಿ ಬಾರಿಸಿರುವ ತುಕಾರಾಂ ಅವರನ್ನು ಈ ಉಪ ಚುನಾವಣೆಯಲ್ಲಿ ಕೈ ಬಿಡುವುದಿಲ್ಲ ಎನ್ನುವುದು ಸಿಎಂ ಭೇಟಿಯ ವೇಳೆಯಲ್ಲಿಯೇ ಅತೃಪ್ತರಿಗೆ ಮನವರಿಕೆ ಆಗಿಹೋಗಿದೆ.
ತುಕಾರಾಂ ವಿರುದ್ಧವಾಗಿ ಟಿಕೆಟ್ ಲಾಡಾಯಿ ಘೋಷಿಸಿದ್ದ ಅತೃಪ್ತರು ಕಳೆದ ಮೂರ್ನಾಕು ದಿನಗಳಿಂದಲೂ ರಾಜಧಾನಿಯೇ ಠೀಕಾಣಿ ಹೂಡಿ, ಅಲ್ಲಿಯೇ ಬಿಡಾರ ಹೂಡಿರುವ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿಯಾಗಿ ಸಂಸದರ ಕುಟುಂಬಕ್ಕೆ ಟಿಕೆಟ್ ನೀಡ ಬಾರದೆಂದು ಸಾಕಷ್ಟು ಒತ್ತಡ ಹೇರುತ್ತಾ ಬಂದಿದ್ದರು.
ಆದರೇ ಶನಿವಾರ ರಾತ್ರಿ ವೇಳೆಗೆಲ್ಲ ಹೈಕಮಾಂಡ್ ತುಕಾರಾಂ ಪರವಾಗಿದೆ ಎನ್ನುವುದು ಮನವರಿಕೆ ಆಗುತ್ತಲೆ ಲಾಡಾಯಿ ಘೋಷಿಸಿದವರು ಸಂಡೂರಿನತ್ತ ವಾಪಾಸಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಶುರುವಾದವು. ಇದು ತುಕಾರಾಂ ಅವರನ್ನು ಇನ್ನಷ್ಟು ನಿರಾಳವಾಗಿಸಿದೆ.
ಎಂಪಿ ಎಲೇಕ್ಷನ್ ಸ್ಪರ್ಧೆಗೆ ಹೈಕಮಾಂಡ್ ಒತ್ತಡ ಹೇರಿತ್ತು!
ಸಂಸದರ ಕುಟುಂಬಕ್ಕೆ ಟಿಕೆಟ್ ನೀಡಲು ಕ್ಷೇತ್ರದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸುತ್ತೀದ್ರು ಹೈಕಮಾಂಡ್ ಮಾತ್ರ ಇದ್ಯಾವುದನ್ನು ಲೆಕ್ಕಿಕರಿಸದೆ, ಪಾರ್ಲಿಮೆಂಟ್ ಮೆಂಬರ್ ಈ.ತುಕಾರಾಂ ಪರವಾಗಿ ರಕ್ಷಣೆಗೆ ನಿಂತು ಬ್ಯಾಟಿಂಗ್, ಬೌಲಿಂಗ್ ಮಾಡಲು ಪ್ರಬಲವಾದ ಕಾರಣವು ಇದೆ.
ಅದೇನೆಂದರೇ, ಇದೇ ಮೇ ಮಾಸದಲ್ಲಿ ಜರುಗಿದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಗ ಸಂಡೂರು ಕ್ಷೇತ್ರದ ಶಾಸಕರಾಗಿದ್ದ ಈ.ತುಕಾರಾಂ ಅವರನ್ನು ಕೇಳಲಾಗಿತ್ತು. ಸ್ಪರ್ಧಿಸಲು ನನಗೆ ಸುತರಾಂ ಇಷ್ಟವೇ ಇಲ್ಲ. ಒಂದು ವೇಳೆ ಅನಿವಾರ್ಯವಾದರೇ ನನ್ನ ಪುತ್ರಿ ಸೌಪರ್ಣಿಕಾ ಅವರನ್ನು ಕಣಕ್ಕೀಳಿಸುವೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರಿಗೆ ತುಕಾರಾಂ ಮಾತು ಕೊಟ್ಟು ಬಂದಿದ್ರು.
ಆದರೇ, ಕರ್ನಾಟಕ ವೊಂದರಿಂದಲೇ 20 ಪ್ಲಸ್ ಸದಸ್ಯರು ಲೋಕಸಭೆಗೆ ಆಯ್ಕೆ ಆಗಿ ಬಂದ್ರೇ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ ಇಂಡಿಯಾ’ ಮೈತ್ರಿಕೂಟ ಸರ್ಕಾರ ರಚಿಸಲು ಬಲ ಸಿಕ್ಕಂತಾಗುತ್ತದೆ. ಹೀಗಾಗಿ ಮೋದಿ ಅಲೆಯನ್ನು ಧಾಟೀಕೊಂಡು ಗೆಲುವಿನ ದಡ ಹತ್ತುವಂತಹ ಬಲವಾದ ಅಭ್ಯರ್ಥಿಗಳನ್ನೇ ಕಣಕ್ಕೀಳಿಸಲು ಹೈಕಮಾಂಡ್ ನಿರ್ಧರಿಸಿತ್ತು. ವಿನ್ನಿಂಗ್ ಕ್ಯಾಂಡಿಡೇಟ್ ಗಳಿಗಾಗಿ ಹುಡುಕಾಟ ನಡೆಸಿತ್ತು.
ಅದರಲ್ಲೂ ತಮ್ಮ ತಾಯಿ ಸೋನಿಯಾಗಾಂಧಿ ಅವರು ಪ್ರತಿನಿಧಿಸಿದ್ದ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಪಾರುಪತ್ಯವನ್ನು ಅಂತ್ಯಕಾಣಿಸಿ, ಅಲ್ಲಿ ಪುನಃ ಕಾಂಗ್ರೆಸ್ ಗೆಲುವಿನ ಅಭಿಯಾನ ಶುರುಮಾಡಬೇಕೆನ್ನುವುದು ಖುದ್ದು ರಾಹುಲ್ ಗಾಂಧಿ ಅವರ ಮುಖ್ಯವಾದ ರಾಜಕೀಯ ನಿರ್ಧಾರವಾಗಿತ್ತು.
ಪಾರ್ಲಿಮೆಂಟ್ ಎಲೇಕ್ಷನ್ ಗೆ ವರ್ಷದ ಅವಧಿ ಇದ್ದಾಗಿನಿಂದಲೇ ಸಮರ್ಥ ಅಭ್ಯರ್ಥಿಯ ತಲಾಶ್ ಕೂಡ ನಡೆಸಿತ್ತು ರಾಹುಲ್ ಟೀಂ. ಎಲ್ಲಾ ಕೋನಗಳಿಂದಲೂ ನೋಡಿದಾಗ ಬಿಜೆಪಿಯ ಶ್ರೀರಾಮುಲು ಅವರನ್ನು ಸೋಲಿಸುವ ತಾಖತ್ ಇದ್ದಿದ್ದು, ಮತ್ತು ಗೆಲುವು ಖಚಿತ ಎನ್ನುವ ಅಭ್ಯರ್ಥಿ ಆಗಿ ಕಂಡಿದ್ದು ಆಗ ಸಂಡೂರು ಕ್ಷೇತ್ರದ ಶಾಸಕರಾಗಿದ್ದ ಈ.ತುಕಾರಾಂ.
ಯಾವಾಗ ನನಗೆ ಬೇಡ, ನನ್ನ ಪುತ್ರಿಯನ್ನು ಅಭ್ಯರ್ಥಿ ಮಾಡಿ ಎಂದು ತುಕಾರಾಂ ಹೇಳುತ್ತಿದ್ದಂತೆಯೇ ಜಾಗೃತಗೊಂಡ ರಾಹುಲ್ ಗಾಂಧಿ, ಮಗಳು ಬೇಡ, ತುಕಾರಾಂ ಅವರೇನೆ ಕಣಕ್ಕೀಳಿಸಲು ನಿರ್ಧಾರ ಮಾಡಿಯೇ ಬಿಟ್ರು.
ಹೈಕಮಾಂಡ್ ಫರ್ಮಾನು ಹೊರಡಿದಾಕ್ಷಣ, ಲೋಕಸಭೆಗೆ ನಿಲ್ಲಲ್ಲು ಮನಸ್ಸಿಲ್ಲದಿದ್ರೂ, ಒಂದೇ ಉಸಿರಿಗೇನೆ ಸ್ಪರ್ಧೆಗೆ ಸಿದ್ದವಾಗಿ ಅಖಾಡಕ್ಕೀಳಿಯುವ ಮೂಲಕ ಹೈಕಮಾಂಡ್ ಆದೇಶವನ್ನು ತಲೆ ಮೇಲಿಟ್ಟುಕೊಳ್ಳುವ ಮೂಲಕ ಅದನ್ನು ತುಕಾರಾಂ ಪಾಲಿಸಿದರು.
ನಂತರ ಚುನಾವಣಾ ಅಖಾಡದ ತುಂಬನೂ ತುಕಾರಾಂ ಅವರಿಸಿಕೊಂಡು, ಶ್ರೀರಾಮುಲು ನಂತಹ ದೈತ್ಯಶಕ್ತಿಯನ್ನು ಸೋಲಿಸಿ, ಗೆಲುವಿನ ನಗೆ ಬೀರಿ, ಇತಿಹಾಸ ನಿರ್ಮಿಸಿದರು.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗುವ ಅವಕಾಶ ಇದ್ಯಾಗು ಲೋಕಸಭೆಗೆ ಸ್ಪರ್ಧಿಸಲು ಆ ದಿನ ಹೈಕಮಾಂಡ್ ಆದೇಶವನ್ನು ಒಪ್ಪಿಕೊಂಡು, ಸ್ಪರ್ಧೆ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ರಾಜ್ಯ ನಾಯಕನಾಗಿ ಬೆಳೆಯುವ ಅವಕಾಶವನ್ನು ಪಕ್ಷದ ಉನ್ನತಿಗಾಗಿಯೇ ತ್ಯಾಗ ಮಾಡಿದ್ದ ತುಕಾರಾಂ ಅವರ ನಡೆ ಹೈಕಮಾಂಡ್ ಮನಸ್ಸನ್ನು ಗೆದ್ದುಕೊಳ್ಳುವಂತೆ ಮಾಡಿತ್ತು.
ಈ ಕಾರಣಕ್ಕೇನೆ ಇವತ್ತು ಅವರ ರಾಜೀನಾಮೆ ಯಿಂದ ತೆರವುಗೊಂಡಿರುವ ಸ್ಥಾನಕ್ಕೆ ಅವರ ಪತ್ನಿಗೆ ಟಿಕೆಟ್ ನೀಡುವ ಮೂಲಕ ತುಕಾರಾಂ ಅವರ ತ್ಯಾಗವನ್ನು ಗೌರವಿಸುವ ಕೆಲಸವನ್ನು ಪಕ್ಷದ ಹೈಕಮಾಂಡ್ ಮಾಡಲಿದೆ ಎನ್ನುವ ಮಾತುಗಳು ಕೆಪಿಸಿಸಿ ಕಾರಿಡಾರ್ ಮತ್ತು ರಾಜಧಾನಿ ತುಂಬನೂ ಜೋರಾಗಿವೆ.
- ಹುಳ್ಳಿಪ್ರಕಾಶ, ಸಂಪಾದಕರು, ಸುನಾಮಿ ನ್ಯೂಸ್.